ಬಂಟ್ವಾಳ, ಮೇ 01, 2026 (ಕರಾವಳಿ ಟೈಮ್ಸ್) : ಶಾಲಾ ಕ್ರೀಡಾಂಗಣದಲ್ಲಿ ನಿಲ್ಲಿಸಿದ್ದ 4 ಶಾಲಾ ಬಸ್ಸುಗಳ ಬ್ಯಾಟರಿಗಳು ಕಳವಾಗಿರುವ ಘಟನೆ ತುಂಬೆ ಪದವಿಪೂರ್ವ ಕಾಲೇಜಿನಲ್ಲಿ ಎಪ್ರಿಲ್ 30 ರಂದು ನಡೆದಿದೆ.
ಈ ಬಗ್ಗೆ ಕಾಲೇಜು ಅಧೀಕ್ಷಕ ಅಬ್ದುಲ್ ಕಬೀರ್ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಶಾಲೆಯ ಶಾಲಾ 4 ಬಸ್ಸುಗಳನ್ನು ಎಂದಿನಂತೆ ಶಾಲಾ ಕ್ರಿಡಾಂಗಣದ ಮರದಡಿಯಲ್ಲಿ ಎಪ್ರಿಲ್ 29 ರಂದು ನಿಲ್ಲಿಸಿದ್ದು, ಎಪ್ರಿಲ್ 30 ರಂದು ಶಾಲಾ ಬಸ್ಸಿನ ಚಾಲಕರು ಬಸ್ ಚಲಾಯಿಸಲು ಬಂದಾಗ ಬಸ್ಸುಗಳು ಸ್ಟಾರ್ಟ್ ಆಗದೆ ಇರುವಾಗ ಪರಿಶೀಲನೆ ನಡೆಸಿದ ವೇಳೆ ಬಸ್ಸುಗಳ ಬ್ಯಾಟರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment