ಆಗಸ್ಟ್ 4 ರ ಮಂಗಳವಾರ ಮಂಗಳೂರು ಉಪವಿಭಾಗದ 5 ತಾಲೂಕುಗಳಲ್ಲಿ ಪ್ರೌಢಶಾಲೆವರೆಗೆ ಹಾಗೂ ಪುತ್ತೂರು ಉಪವಿಭಾಗದ 4 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ ಘೋಷಣೆ - Karavali Times ಆಗಸ್ಟ್ 4 ರ ಮಂಗಳವಾರ ಮಂಗಳೂರು ಉಪವಿಭಾಗದ 5 ತಾಲೂಕುಗಳಲ್ಲಿ ಪ್ರೌಢಶಾಲೆವರೆಗೆ ಹಾಗೂ ಪುತ್ತೂರು ಉಪವಿಭಾಗದ 4 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ ಘೋಷಣೆ - Karavali Times

728x90

3 August 2026

ಆಗಸ್ಟ್ 4 ರ ಮಂಗಳವಾರ ಮಂಗಳೂರು ಉಪವಿಭಾಗದ 5 ತಾಲೂಕುಗಳಲ್ಲಿ ಪ್ರೌಢಶಾಲೆವರೆಗೆ ಹಾಗೂ ಪುತ್ತೂರು ಉಪವಿಭಾಗದ 4 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ ಘೋಷಣೆ

ಮಂಗಳೂರು, ಆಗಸ್ಟ್ 3, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 4 ರಂದು ಮಂಗಳವಾರ ಮಂಗಳೂರು ಉಪವಿಭಾಗದ ಮಂಗಳೂರು, ಉಳ್ಳಾಲ, ಬಂಟ್ವಾಳ, ಮುಲ್ಕಿ ಹಾಗೂ ಮೂಡಬಿದ್ರೆ ತಾಲೂಕುಗಳಲ್ಲಿ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢಶಾಲೆಗಳವರೆಗೆ ಹಾಗೂ ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು, ಬೆಳ್ತಂಗಡಿ, ಕಡಬ ಹಾಗೂ ಸುಳ್ಯ ತಾಲೂಕುಗಳಲ್ಲಿ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢಶಾಲೆ, ಐಟಿಐ, ಡಿಪೆÇ್ಲಮಾ ಹಾಗೂ ಪದವಿಪೂರ್ವ ಕಾಲೇಜುಗಳವರೆಗೆ ರಜೆ ಘೋಷಿಸಿ ದ ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ದರ್ಶನ್ ಎಚ್ ವಿ ಅವರು ಸೋಮವಾರ ರಾತ್ರಿ ಆದೇಶಿಸಿದ್ದಾರೆ. ಜಿಲ್ಲಾಡಳಿತ ಆದೇಶ ಧಿಕ್ಕರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅವರು ಆದೇಶದಲ್ಲಿ ಎಚ್ಚರಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಆಗಸ್ಟ್ 4 ರ ಮಂಗಳವಾರ ಮಂಗಳೂರು ಉಪವಿಭಾಗದ 5 ತಾಲೂಕುಗಳಲ್ಲಿ ಪ್ರೌಢಶಾಲೆವರೆಗೆ ಹಾಗೂ ಪುತ್ತೂರು ಉಪವಿಭಾಗದ 4 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ ಘೋಷಣೆ Rating: 5 Reviewed By: karavali Times
Scroll to Top