ಮಾರಕ ಕಾಯಿಲೆಯಿಂದ ರಕ್ಷೆಗೆ ನಾಝಿಲತ್ ಕುನೂತ್ ಪಠಿಸಲು ಜಿಲ್ಲಾ ಖಾಝಿ ಕರೆ - Karavali Times ಮಾರಕ ಕಾಯಿಲೆಯಿಂದ ರಕ್ಷೆಗೆ ನಾಝಿಲತ್ ಕುನೂತ್ ಪಠಿಸಲು ಜಿಲ್ಲಾ ಖಾಝಿ ಕರೆ - Karavali Times

728x90

11 March 2020

ಮಾರಕ ಕಾಯಿಲೆಯಿಂದ ರಕ್ಷೆಗೆ ನಾಝಿಲತ್ ಕುನೂತ್ ಪಠಿಸಲು ಜಿಲ್ಲಾ ಖಾಝಿ ಕರೆ



ಮಂಗಳೂರು (ಕರಾವಳಿ ಟೈಮ್ಸ್) : ಪ್ರಪಂಚದಾದ್ಯಂತ ಮಾರಕ ಕೊರೋನ ರೋಗವು ವ್ಯಾಪಿಸುತ್ತಿದ್ದು, ಇಂತಹ ಹಲವು ಸಂಕಷ್ಟಗಳು ಮಾನವ ಕೋಟಿಗೆ ಜಗತ್ತಿನಾದ್ಯಂತ ಇಂದು ಎದುರಾಗುತ್ತಿದ್ದು, ಇಂತಹ ಎಲ್ಲಾ ಸಂಕಷ್ಟಮಯ ಪರಿಸ್ಥಿತಿಗಳಿಂದ ರಕ್ಷೆ ಹೊಂದಲು ದಿನದ ಎಲ್ಲಾ ಕಡ್ಡಾಯ ನಮಾಝಿನಲ್ಲಿ ನಾಝಿಲತ್ ಕುನೂತ್ ಓದಲು ಹಾಗೂ ವಿಪತ್ತುಗಳಿಂದ ರಕ್ಷೆ ಹೊಂದಲು ದಾನ ಧರ್ಮ ಅಧಿಕಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ಕರೆ ನೀಡಿದ್ದಾರೆ.

ಕೇರಳ ರಾಜ್ಯದಲ್ಲೂ ಸಮಸ್ತ ನೇತಾರರು ನಾಝಿಲತಿನ ಖುನೂತ್ ಓದಲು ಕರೆ ನೀಡಿದ್ದು, ಪಾಣಕ್ಕಾಡ್ ಸಯ್ಯಿದ್ ಹೈದರಲೀ ಶಿಹಾಬ್ ತಂಙಳ್ ಹಾಗೂ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಹಾಗೂ ಸಮಸ್ತ ಕಾರ್ಯದರ್ಶಿ ಶೈಖುಲ್ ಜಾಮಿಅ: ಆಲಿಕುಟ್ಟಿ ಉಸ್ತಾದ್ ಈ ಬಗ್ಗೆ ಜನತೆಗೆ ಕರೆ ನೀಡಿದ್ದಾರೆ ಎಂದು ಸಮಸ್ತ ನೇತಾರರು ತಿಳಿಸಿದ್ದಾರೆ.













  • Blogger Comments
  • Facebook Comments

0 comments:

Post a Comment

Item Reviewed: ಮಾರಕ ಕಾಯಿಲೆಯಿಂದ ರಕ್ಷೆಗೆ ನಾಝಿಲತ್ ಕುನೂತ್ ಪಠಿಸಲು ಜಿಲ್ಲಾ ಖಾಝಿ ಕರೆ Rating: 5 Reviewed By: karavali Times
Scroll to Top