ಕುಕ್ಕಿಪಾಡಿ : ಆಶಾ ಕಾರ್ಯಕರ್ತೆಗೆ ಪೊರಕೆ ಹಿಡಿದ ಮಂತ್ರವಾದಿಯ ಪತ್ನಿ - Karavali Times ಕುಕ್ಕಿಪಾಡಿ : ಆಶಾ ಕಾರ್ಯಕರ್ತೆಗೆ ಪೊರಕೆ ಹಿಡಿದ ಮಂತ್ರವಾದಿಯ ಪತ್ನಿ - Karavali Times

728x90

11 May 2020

ಕುಕ್ಕಿಪಾಡಿ : ಆಶಾ ಕಾರ್ಯಕರ್ತೆಗೆ ಪೊರಕೆ ಹಿಡಿದ ಮಂತ್ರವಾದಿಯ ಪತ್ನಿ





ಬಂಟ್ವಾಳ (ಕರಾವಳಿ ಟೈಮ್ಸ್) : ಮನೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಸೇರಿಸುತ್ತಿರುವ ಬಗ್ಗೆ ವಿಚಾರಿಸಲು ಮನೆಗೆ ಬಂದ ಆಶಾ ಕಾರ್ಯಕರ್ತೆ ಮೇಲೆ ಪೆÇರಕೆಯಲ್ಲಿ ಹಲ್ಲೆಗೆ ಯತ್ನಿಸಿದ ಘಟನೆ ತಾಲೂಕಿನ ಕುಕ್ಕಿಪಾಡಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ವಿಶ್ವನಾಥ ಎಂಬವರು ತನ್ನ ಮನೆಯಲ್ಲಿ ಜನ ಸೇರಿಸಿ ಮಂತ್ರವಾದ ನಡೆಸುತ್ತಿದ್ದರು ಎಂಬ ಸಾರ್ವಜನಿಕ ಆರೋಪದ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡದ ಬಗ್ಗೆ ತಿಳಿಯಲು ಮನೆಗೆ ತೆರಳಿದ ಆಶಾ ಕಾರ್ಯಕರ್ತೆ ಪುಷ್ಪಲತಾ ಎಂಬವರಿಗೆ ಮಂತ್ರವಾದಿಯ ಪತ್ನಿ ಶ್ರೀಮತಿ ಎಂಬ ಮಹಿಳೆ ಪೊರಕೆ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಶ್ರೀಮತಿಯ ಪತಿ ವಿಶ್ವನಾಥ ಎಂಬಾತನಿಂದ ಮನೆಯಲ್ಲಿ ಮಂತ್ರವಾದಿ ಕಾರ್ಯಗಳು ನಡೆಯುತ್ತಿದ್ದು, ಹೀಗಾಗಿ ಇವರ ಮನೆಗೆ ಹತ್ತಾರು ಜನ ಬರುತ್ತಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಸೇರಿದ್ದನ್ನು ಆಶಾ ಕಾರ್ಯಕರ್ತೆ ಪುಷ್ಪಲತಾ ಅವರು ಪ್ರಶ್ನಿಸಿದ್ದಾರೆ. ಬಳಿಕ ಸ್ಥಳೀಯ ಕುಕ್ಕಿಪಾಡಿ ಪಂಚಾಯತ್ ಸದಸ್ಯ ಯೋಗೀಶ್ ಆಚಾರ್ಯ ಎಂಬವರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಸದಸ್ಯನ ಮೇಲೂ ಹಲ್ಲೆ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕುಕ್ಕಿಪಾಡಿ : ಆಶಾ ಕಾರ್ಯಕರ್ತೆಗೆ ಪೊರಕೆ ಹಿಡಿದ ಮಂತ್ರವಾದಿಯ ಪತ್ನಿ Rating: 5 Reviewed By: karavali Times
Scroll to Top