ಮಾಜಿ ಸಚಿವ ರೈ ಮಹತ್ವಾಕಾಂಕ್ಷಿಯ ಆಲಂಪುರಿ ಟ್ರೀ ಪಾರ್ಕಿಗೆ ಶಾಸಕ ನಾಯಕ್ ಚಾಲನೆ - Karavali Times ಮಾಜಿ ಸಚಿವ ರೈ ಮಹತ್ವಾಕಾಂಕ್ಷಿಯ ಆಲಂಪುರಿ ಟ್ರೀ ಪಾರ್ಕಿಗೆ ಶಾಸಕ ನಾಯಕ್ ಚಾಲನೆ - Karavali Times

728x90

12 February 2021

ಮಾಜಿ ಸಚಿವ ರೈ ಮಹತ್ವಾಕಾಂಕ್ಷಿಯ ಆಲಂಪುರಿ ಟ್ರೀ ಪಾರ್ಕಿಗೆ ಶಾಸಕ ನಾಯಕ್ ಚಾಲನೆ

ಬಂಟ್ವಾಳ, ಬಂಟ್ವಾಳ, ಫೆ. 12, 2021 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ಕನಸಿನ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಆಲಂಪುರಿ ಟ್ರೀ ಪಾರ್ಕ್‍ನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಶುಕ್ರವಾರ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ನಾಯಕ್, ಪರಿಸರ ಸಂರಕ್ಷಣೆ, ಅಂತರ್ಜಲ ವೃದ್ದಿಗೆ ಇಂತಹ ವೃಕ್ಷೋದ್ಯಾನವನಗಳೂ ಅತ್ಯಂತ ಸಹಕಾರಿ ಎಂದರಲ್ಲದೆ ಸುಸಜ್ಜಿತ ಆಲಂಪುರಿ ಟ್ರೀ ಪಾರ್ಕಿಗೆ ಮಾಜಿ ಸಚಿವರ ಸಹಕಾರದ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಮಾಜಿ ಸಚಿವ ಬಿ ರಮಾನಾಥ ರೈ ಅರಣ್ಯ ಮಂತ್ರಿಯಾಗಿದ್ದ ಸಂದರ್ಭ ಕಾವಳಪಡೂರು ಗ್ರಾಮದ ವಗ್ಗ ಸಮೀಪದ ಆಲಂಪುರಿ ಎಂಬಲ್ಲಿ ಹತ್ತಿರ ಹತ್ತಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನಕ್ಕೆ ಯೋಜನೆ ರೂಪಿಸಿ ಅದಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದರು. ಇದೀಗ ಅದು ಪೂರ್ಣಗೊಂಡು ಲೋಕಾರ್ಪಣೆಗೊಂಡಿದೆ. ಈ ಸಂದರ್ಭ ಮಾಜಿ ಸಚಿವ ಬಿ ರಮಾನಾಥ ರೈ, ಜಿ ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯ ಬಿ ಪದ್ಮಶೇಖರ ಜೈನ್, ತಾ ಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ವiಲ್ಲಿಕಾ ವಿ ಶೆಟ್ಟಿ, ಸದಸ್ಯೆ ಧನಲಕ್ಷ್ಮಿ ಬಂಗೇರಾ, ಬೆಂಗಳೂರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ ಮೋಹನ್, ಬೆಂಗಳೂರು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಅರಕಲ್, ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್, ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ ಕರಿಕಾಲನ್, ಮಂಗಳೂರು ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಎನ್ ಸುಬ್ರಹ್ಮಣ್ಯ ರಾವ್, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಮಾಜಿ ಅಧ್ಯಕ್ಷ ಕೆ ಮಾಯಿಲಪ್ಪ ಸಾಲ್ಯಾನ್, ಪ್ರಮುಖರಾದ ಜಿನರಾಜ ಅರಿಗ, ಚಂದ್ರಶೇಖರ ಕರ್ಣ ಮೊದಲಾದವರು ಭಾಗವಹಿಸಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಮಾಜಿ ಸಚಿವ ರೈ ಮಹತ್ವಾಕಾಂಕ್ಷಿಯ ಆಲಂಪುರಿ ಟ್ರೀ ಪಾರ್ಕಿಗೆ ಶಾಸಕ ನಾಯಕ್ ಚಾಲನೆ Rating: 5 Reviewed By: karavali Times
Scroll to Top