ಬಂಟ್ವಾಳ, ಮಾ. 10, 2021 (ಕರಾವಳಿ ಟೈಮ್ಸ್) : ತಾಲೂಕಿನ ಕೊಳ್ನಾಡು ಗ್ರಾಮದ ನಾರ್ಶ ನಿವಾಸಿ ಸೂಫಿ ಮುಕ್ರಿ ಎಂಬವರ ಪುತ್ರ ಮುತ್ತಲಿಬ್ ನಾರ್ಶ (40) ಅವರ ಮೃತದೇಹ ದುಬೈನ ಅಲ್-ರಫಾದಲ್ಲಿ ಪತ್ತೆ ಯಾಗಿದೆ.
ಅಪರಿಚಿತ ಮೃತದೇಹದ ಮಾಹಿತಿ ಪಡೆದ ಅಲ್ಲಿನ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ರಾಶೀದ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಮೃತ ವ್ಯಕ್ತಿಯ ಪಾಸ್ಪೋರ್ಟ್ ಸಂಖ್ಯೆಯ ಆಧಾರದಲ್ಲಿ ಈತ ಭಾರತೀಯನೆಂಬುದು ಸ್ಪಷ್ಟ ವಾಗಿದ್ದು ಅಲ್ಲಿನ ಪೊಲೀಸರು ಭಾರತೀಯ ರಾಯಭಾರಿ ಕಛೇರಿಗೆ ಮಾಹಿತಿ ನೀಡಿದ್ದಾರೆ. ರಾಯಭಾರಿ ಕಛೇರಿಯ ಮಾಹಿತಿಯಂತೆ ದ.ಕ. ಜಿಲ್ಲಾಡಳಿತ ಬಂಟ್ವಾಳ ತಹಶೀಲ್ದಾರರ ಮೂಲಕ ಮೃತರ ವಿಳಾಸ ಪತ್ತೆ ಮಾಡಿದೆ.
ಧಾರ್ಮಿಕ ಗುರುವಾಗಿದ್ದ ಮುತ್ತಲಿಬ್ ಬಳಿಕ ತಾಂತ್ರಿಕ ವ್ಯಾಸಂಗ ಪಡೆದು ದುಬೈಗೆ ತೆರಳಿದ ಬಳಿಕ ಅಲ್ಲಿ ಕೆಲಸಕ್ಕೆ ಸೇರಿದ್ದರು. ಕೆಲ ದಿನಗಳಿಂದ ಮುತ್ತಲಿಬ್ ಅವರ ಮೊಬೈಲ್ ಸ್ವಿಚ್ಡಾಫ್ ಬರುತ್ತಿದ್ದು ಮನೆಯವರು ಆತಂಕಕ್ಕೀಡಾಗಿದ್ದರು. ಮಾ. 8 ರಂದು ಇವರ ಮೃತದೇಹ ಅಲ್-ರಫಾದಲ್ಲಿ ಪತ್ತೆಯಾಗಿದ್ದು, ನಿಗೂಢ ಸಾವಿನ ನಿಗೂಢತೆ ಇನ್ನಷ್ಟೇ ಬಯಲಾಗಬೇಕಿದೆ.
0 comments:
Post a Comment