ಮಳೆ ಬಿರುಸು : ಜೂನ್ 17ರವರೆಗೆ ಕಟ್ಟೆಚ್ಚರ ಘೋಷಿಸಿದ ಹವಾಮಾನ ಇಲಾಖೆ - Karavali Times ಮಳೆ ಬಿರುಸು : ಜೂನ್ 17ರವರೆಗೆ ಕಟ್ಟೆಚ್ಚರ ಘೋಷಿಸಿದ ಹವಾಮಾನ ಇಲಾಖೆ - Karavali Times

728x90

13 June 2021

ಮಳೆ ಬಿರುಸು : ಜೂನ್ 17ರವರೆಗೆ ಕಟ್ಟೆಚ್ಚರ ಘೋಷಿಸಿದ ಹವಾಮಾನ ಇಲಾಖೆ

ಬೆಂಗಳೂರು, ಜೂನ್ 14, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಮುಂಗಾರು ಮಳೆ ಕಳೆದೆರಡು ದಿನಗಳಿಂದ ಬಿರುಸುಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಜೂನ್ 17ರವರೆಗೂ ರಾಜ್ಯಾದ್ಯಂತ ಬಿರುಸಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 

ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡು ಜಿಲ್ಲೆಗಳೂ ಸೇರಿದಂತೆ ರಾಜ್ಯಾದ್ಯಂತ ಜೂನ್ 17 ರವರೆಗೆ ಮಳೆ ತೀವ್ರಗೊಳ್ಳುವ ಮುನ್ನಚ್ಚರಿಕೆ ನೀಡಿರುವ ಹವಾಮಾನ ಇಲಾಖೆಯ ನಿರ್ದೇಶಕ ಸಿ ಎಸ್ ಪಾಟೀಲ್ ಮೀನುಗಾರಿಕೆಗೆ ಸಮುದ್ರಗಳಿಗೆ ತೆರಳುವ ಮುನ್ನ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಳೆ ಬಿರುಸು : ಜೂನ್ 17ರವರೆಗೆ ಕಟ್ಟೆಚ್ಚರ ಘೋಷಿಸಿದ ಹವಾಮಾನ ಇಲಾಖೆ Rating: 5 Reviewed By: karavali Times
Scroll to Top