ಸಜಿಪಮುನ್ನೂರು ಪಂಚಾಯತ್ ಮಾಜಿ ಸದಸ್ಯ ಕಿರಣ್ ನಿಧನ : ವಲಯ ಕಾಂಗ್ರೆಸ್ ಕಂಬನಿ  - Karavali Times ಸಜಿಪಮುನ್ನೂರು ಪಂಚಾಯತ್ ಮಾಜಿ ಸದಸ್ಯ ಕಿರಣ್ ನಿಧನ : ವಲಯ ಕಾಂಗ್ರೆಸ್ ಕಂಬನಿ  - Karavali Times

728x90

6 August 2021

ಸಜಿಪಮುನ್ನೂರು ಪಂಚಾಯತ್ ಮಾಜಿ ಸದಸ್ಯ ಕಿರಣ್ ನಿಧನ : ವಲಯ ಕಾಂಗ್ರೆಸ್ ಕಂಬನಿ 

 ಬಂಟ್ವಾಳ, ಆಗಸ್ಟ್ 07, 2021 (ಕರಾವಳಿ ಟೈಮ್ಸ್) : ಸಜಿಪಮುನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಆಲಾಡಿ ನಿವಾಸಿ ಕಿರಣ್ ಕುಮಾರ್ (44) ಅಲ್ಪ ಕಾಲದ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಂ

ಪಂಚಾಯತ್ ಮಾಜಿ ಸದಸ್ಯರಾಗಿದ್ದ ಇವರು ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 

 ಮೃತರು ಪತ್ನಿ, ಮೂರು ಮಂದಿ ಪುತ್ರರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. 

 ಸಜಿಪಮುನ್ನೂರು ವಲಯ ಕಾಂಗ್ರೆಸ್ ಕಂಬನಿ 

 ಕಿರಣ್ ಕುಮಾರ್ ಅವರ ನಿಧನಕ್ಕೆ ಸಜಿಪಮುನ್ನೂರು ವಲಯ ಕಾಂಗ್ರೆಸ್ ತೀವ್ರ ಕಂಬನಿ ಮಿಡಿದಿದೆ.

 ಕಿರಣ್ ಕುಮಾರ್ ಅವರ ಅಕಾಲಿಕ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಜನಸೇವಕ ಯುವ ವ್ಯಕ್ತಿತ್ವವನ್ನು ಸಮಾಜ‌ ಕಳೆದುಕೊಂಡಂತಾಗಿದೆ. 

ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗ್ರಾ ಪಂ ಸದಸ್ಯರಾಗಿ ಆಯ್ಕೆಯಾಗಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿತ್ವ ಮೈಗೂಡಿಸಿಕೊಂಡು ಸರ್ವರೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಂಡು ಜಾತ್ಯಾತೀತ ಸಿದ್ದಾಂತವನ್ನು ಜೀವನದುದ್ದಕ್ಕೂ ನಂಬಿಕೊಂಡು ಬಂದಿದ್ದರು. 

ಸಮಾಜದ ಬಡ-ಬಗ್ಗರ ಬಗ್ಗೆ ಕಾರುಣ್ಯ ಮನೋಭಾವ ಹೊಂದಿದ್ದ ಇವರ ಅಗಲಿಕೆ ಸೌಹಾರ್ದ ಸಮಾಜಕ್ಕೆ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ‌ ದೊರೆಯುವುದರ ಜತೆಗೆ ಮೃತರ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಅವರ ಅಗಲಿಕೆಯ ನೋವು ಸಹಿಸುವ ಶಕ್ರಿ ಭಗವಂತ ಕರುಣಿಸಲಿ ಎಂದು ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಯೂಸುಫ್ ಕರಂದಾಡಿ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಸಜಿಪಮುನ್ನೂರು ಪಂಚಾಯತ್ ಮಾಜಿ ಸದಸ್ಯ ಕಿರಣ್ ನಿಧನ : ವಲಯ ಕಾಂಗ್ರೆಸ್ ಕಂಬನಿ  Rating: 5 Reviewed By: karavali Times
Scroll to Top