ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಹಾಶೀರ್ ಪೇರಿಮಾರ್ ಹಾಗೂ ವೈಭವ್ ಶೆಟ್ಟಿ ನಾರ್ಲ ಆಯ್ಕೆ - Karavali Times ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಹಾಶೀರ್ ಪೇರಿಮಾರ್ ಹಾಗೂ ವೈಭವ್ ಶೆಟ್ಟಿ ನಾರ್ಲ ಆಯ್ಕೆ - Karavali Times

728x90

22 September 2021

ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಹಾಶೀರ್ ಪೇರಿಮಾರ್ ಹಾಗೂ ವೈಭವ್ ಶೆಟ್ಟಿ ನಾರ್ಲ ಆಯ್ಕೆ

ಮಂಗಳೂರು, ಸೆಪ್ಟಂಬರ್ 22, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೂತನ ಪ್ರಧಾನ ಕಾರ್ಯದರ್ಶಿಗಳಾಗಿ ಪುದು ಗ್ರಾ.ಪಂ ಸದಸ್ಯ ಹಾಶೀರ್ ಪೇರಿಮಾರ್ ಹಾಗೂ ತಲಪಾಡಿ ಗ್ರಾ ಪಂ ಸದಸ್ಯ ವೈಭವ್ ಶೆಟ್ಟಿ ನಾರ್ಲ ಅವರನ್ನು ನೇಮಕಗೊಳಿಸಲಾಗಿದೆ.

ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ಅವರ ನಿರ್ದೇಶನದಂತೆ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ ಎಸ್ ರಕ್ಷಾ ರಾಮಯ್ಯ ಅವರು ಹಾಶೀರ್ ಪೇರಿಮಾರ್ ಹಾಗೂ ವೈಭವ್ ಶೆಟ್ಟಿ ನಾರ್ಲ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಇವರು ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಕೋವಿಡ್-19 ಹೆಲ್ಪ್ ಲೈನ್ ತಂಡದಲ್ಲಿ ಮತ್ತು ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ರಾಜಕೀಯದ ಜೊತೆ ಸಾಮಾಜಿಕವಾಗಿಯೂ, ಧಾರ್ಮಿಕವಾಗಿಯೂ ಗುರುತಿಸಿಕೊಂಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ ಹಾಶೀರ್ ಪೇರಿಮಾರ್ ಹಾಗೂ ವೈಭವ್ ಶೆಟ್ಟಿ ನಾರ್ಲ ಆಯ್ಕೆ Rating: 5 Reviewed By: karavali Times
Scroll to Top