ಬಂಟ್ವಾಳ : ತಾಲೂಕು ಕಚೇರಿ ಆಹಾರ ಶಾಖಾ ನೌಕರೆಗೆ ಬೀಳ್ಕೊಡುಗೆ - Karavali Times ಬಂಟ್ವಾಳ : ತಾಲೂಕು ಕಚೇರಿ ಆಹಾರ ಶಾಖಾ ನೌಕರೆಗೆ ಬೀಳ್ಕೊಡುಗೆ - Karavali Times

728x90

4 January 2022

ಬಂಟ್ವಾಳ : ತಾಲೂಕು ಕಚೇರಿ ಆಹಾರ ಶಾಖಾ ನೌಕರೆಗೆ ಬೀಳ್ಕೊಡುಗೆ

ಬಂಟ್ವಾಳ, ಜನವರಿ 04, 2022 (ಕರಾವಳಿ ಟೈಮ್ಸ್) : ಕಂದಾಯ ಇಲಾಖೆಯಲ್ಲಿ ಸುದೀರ್ಘ ಕಾಲ ಕರ್ತವ್ಯ ನಿರ್ವಹಿಸಿ ವಯೋನಿವೃತ್ತರಾದ ಆಹಾರ ಶಾಖೆಯ ದ್ವಿತೀಯ ದರ್ಜೆ ಸಹಾಯಕಿ ಶೋಭಾ ಅವರನ್ನು ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಬೀಳ್ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ್ ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸಿದ ಶೋಭಾರವರು ಆಹಾರ ಶಾಖೆಯನ್ನು ಸಮರ್ಥವಾಗಿ  ನಿಭಾಯಿಸಿದ್ದಾರೆ. ಸೌಮ್ಯ ಸ್ವಭಾವದ ಇವರ ಮುಂದಿನ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ನರೇಂದ್ರ ನಾಥ್ ಭಟ್ ಮಿತ್ತೂರು, ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕರಾದ ಧರ್ಮ ಸಾಮ್ರಾಜ್ಯ, ಮಂಜುನಾಥ್ ಕೆ ಎಚ್, ಕುಮಾರ್ ಟಿ ಸಿ, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ಗ್ರಾಮ ಲೆಕ್ಕಾಧಿಕಾರಿ ಜನಾರ್ದನ್ ಜೆ ಸ್ವಾಗತಿಸಿ, ನಾರಾಯಣ ಗೌಡ ವಂದಿಸಿದರು. ಚುನಾವಣೆ ಶಾಖಾ ಉಪತಹಶೀಲ್ದಾರ್ ನವೀನ್ ಬೆಂಜನಪದವು ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ತಾಲೂಕು ಕಚೇರಿ ಆಹಾರ ಶಾಖಾ ನೌಕರೆಗೆ ಬೀಳ್ಕೊಡುಗೆ Rating: 5 Reviewed By: karavali Times
Scroll to Top