ಬಂಟ್ವಾಳ, ಎಪ್ರಿಲ್ 14, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಗುರುವಾರವೂ ಮಳೆ ಹಾನಿ ಮುಂದುವರಿದ ಬಗ್ಗೆ ವರದಿಯಾಗಿದೆ.
ಕರೋಪಾಡಿ ಗ್ರಾಮದ ಪಾದೆಕಲ್ಲು ನಿವಾಸಿ ವಿನೋದ್ ಬಿನ್ ಕೃಷ್ಣ ಭಟ್ ಅವರ ಹಟ್ಟಿಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ.
ಪೆರಾಜೆ ಗ್ರಾಮದ ಮಾಯಿಲಾಜೆ ನಿವಾಸಿ ಪುಷ್ಪಲತಾ ಅವರ ಮನೆಯ ತಡೆ ಗೋಡೆ ಕುಸಿತ ಉಂಟಾಗಿ ಹಾನಿ ಸಂಭವಿಸಿದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment