ಬಂಟ್ವಾಳ (ಕರಾವಳಿ ಟೈಮ್ಸ್) : ಕೊರೊನೊ ಮುಂಜಾಗೃತಿಗಾಗಿ ಜಿಲ್ಲಾಡಳಿತದ ಅದೇಶದಂತೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್.ನೇತ್ರತ್ವದಲ್ಲಿ ಇಂದು ಅಂಗಡಿಗಳನ್ನು ಬಂದ್ ಮಾಡುವಂತೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ.
ಮಾ.31 ರ ವರೆಗೆ ಯಾರು ಮನೆಯಿಂದ ಹೊರಬಾರದು ಎಂಬ ಕಟ್ಟು ನಿಟ್ಟಿನ ಆದೇಶ ಮಾಡಿದರ ಜೊತೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.
ಬಂಟ್ವಾಳ, ಬಿಸಿರೋಡು , ಪರಂಗಿಪೇಟೆ, ಕೈಕಂಬ, ವಿಟ್ಲ, ಕಲ್ಲಡ್ಕ ಸೇರಿದಂತೆ ಎಲ್ಲಾ ಪೇಟೆ ಗಳನ್ನು ಸಂಪೂರ್ಣ ಬಂದ್ ಮಾಡಲು ಅವರು ಧ್ವನಿ ವರ್ಧಕ ಬಳಸಿದ್ದಾರೆ.
ಬಂದ್ ಮಾಡದ ಅಂಗಡಿ ಮಾಲಕರಿಗೆ ಹಾಗೂ ರಸ್ತೆಯಲ್ಲಿ ರುವ ವಾಹನ ಚಾಲಕರ ಮೇಲೆ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ತಹಶೀಲ್ದಾರ್ ಅವರು ಧ್ವನಿವರ್ಧಕದ ಮೂಲಕ ನೀಡಿದ್ದಾರೆ.
0 comments:
Post a Comment