ಬಂಟ್ವಾಳ ತಾಲೂಕು ಕಛೇರಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ರಾಧಾಕೃಷ್ಣ ಇನ್ನಿಲ್ಲ! - Karavali Times ಬಂಟ್ವಾಳ ತಾಲೂಕು ಕಛೇರಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ರಾಧಾಕೃಷ್ಣ ಇನ್ನಿಲ್ಲ! - Karavali Times

728x90

18 September 2020

ಬಂಟ್ವಾಳ ತಾಲೂಕು ಕಛೇರಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ರಾಧಾಕೃಷ್ಣ ಇನ್ನಿಲ್ಲ!




ಬಂಟ್ವಾಳ, ಸೆ. 19, 2020 (ಕರಾವಳಿ ಟೈಮ್ಸ್) : ಇಲ್ಲಿನ ತಾಲೂಕು ಕಛೇರಿಯಲ್ಲಿ ಕೇಂದ್ರೀಯ ಶಿರಸ್ತೇದಾರರಾಗಿ ಪ್ರಭಾರ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಧಾಕೃಷ್ಣ (50) ಅವರು ಶನಿವಾರ ಮುಂಜಾನೆ ಹೃದಯ ಬೇನೆಗೆ ಒಳಗಾಗಿ ಬಿ ಸಿ ರೋಡಿನಲ್ಲಿ ನಿಧನರಾಗಿದ್ದಾರೆ. 

ಮೂಲತಃ ಶಿರ್ತಾಡಿ ನಿವಾಸಿಯಾಗಿರುವ ಇವರು ಹಾಸನದಿಂದ ಭಡ್ತಿ ವರ್ಗಾವಣೆಗೊಂಡು ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೆ ಬಂಟ್ವಾಳ ತಾಲೂಕು ಕಛೇರಿಗೆ ಸಾಮಾಜಿಕ ಭದ್ರತೆ ಶಿರಸ್ತೇದಾರ್ ಆಗಿ ಸೇವೆಗೆ ನಿಯೋಜನೆಗೊಂಡಿದ್ದರು. ಬಳಿಕ ಅವರನ್ನು ಪ್ರಭಾರ ನೆಲೆಯಲ್ಲಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ಆಗಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಗುರುವಾರವಷ್ಟೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವಕರ್ಮ ಜಯಂತಿ ಆಚರಣೆ ಉದ್ಘಾಟಿಸಿ ಹಿತವಚನಗಳನ್ನು ನೀಡಿದ್ದರು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. 










  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ತಾಲೂಕು ಕಛೇರಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ರಾಧಾಕೃಷ್ಣ ಇನ್ನಿಲ್ಲ! Rating: 5 Reviewed By: karavali Times
Scroll to Top