5 ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿಗಳ ಪಟ್ಟಿ ಘೋಷಿಸಿದ ಸಿಎಂ ಬೊಮ್ಮಾಯಿ : ದಕ್ಷಿಣ ಕನ್ನಡಕ್ಕೆ ಸುನಿಲ್ ಕುಮಾರ್, ಅಂಗಾರಗೆ ಉಡುಪಿ, ಕೋಟಾಗೆ ಉತ್ತರ ಕನ್ನಡ ಉಸ್ತುವಾರಿ - Karavali Times 5 ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿಗಳ ಪಟ್ಟಿ ಘೋಷಿಸಿದ ಸಿಎಂ ಬೊಮ್ಮಾಯಿ : ದಕ್ಷಿಣ ಕನ್ನಡಕ್ಕೆ ಸುನಿಲ್ ಕುಮಾರ್, ಅಂಗಾರಗೆ ಉಡುಪಿ, ಕೋಟಾಗೆ ಉತ್ತರ ಕನ್ನಡ ಉಸ್ತುವಾರಿ - Karavali Times

728x90

24 January 2022

5 ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿಗಳ ಪಟ್ಟಿ ಘೋಷಿಸಿದ ಸಿಎಂ ಬೊಮ್ಮಾಯಿ : ದಕ್ಷಿಣ ಕನ್ನಡಕ್ಕೆ ಸುನಿಲ್ ಕುಮಾರ್, ಅಂಗಾರಗೆ ಉಡುಪಿ, ಕೋಟಾಗೆ ಉತ್ತರ ಕನ್ನಡ ಉಸ್ತುವಾರಿ

ಬೆಂಗಳೂರು, ಜನವರಿ 24, 2022 (ಕರಾವಳಿ ಟೈಮ್ಸ್) : ಮುಖ್ಯಮಂತ್ರಿಯಾಗಿ 5 ತಿಂಗಳು ಪೂರೈಸಿದ ಬಳಿಕ ಇದೀಗ ರಾಜ್ಯದ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದ್ದಾರೆ. 

ಸೋಮವಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿರುವ ರಾಜ್ಯ ಸರಕಾರ, 28 ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಉಸ್ತುವಾರಿ ಸಚಿವರ ನೇಮಕವಾಗಿದೆ. ಇದುವರೆಗೆ ಸ್ವಾತಂತ್ರ್ಯ ದಿನಾಚರಣೆ ಮತ್ತು ನವೆಂಬರ್ 1 ರಂದು ಧ್ವಜಾರೋಹಣ ಮಾಡಲು ಮಾತ್ರ ಸಚಿವರಿಗೆ ಉಸ್ತುವಾರಿ ನೀಡಲಾಗಿತ್ತು. ಇದೀಗ ಪೂರ್ಣ ಪ್ರಮಾಣದಲ್ಲಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ. ಆದರೆ ಇಬ್ಬರು ಪ್ರಮುಖ ಸಚಿವರಾಗಿರುವ ಆರ್ ಅಶೋಕ್ ಹಾಗೂ ಮಾಧುಸ್ವಾಮಿ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿಲ್ಲ.


ನೂತನ ಜಿಲ್ಲಾ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಇಂತಿದೆ : 

ಬಸವರಾಜ ಬೊಮ್ಮಾಯಿ - ಬೆಂಗಳೂರು ನಗರ

ಗೋವಿಂದ ಕಾರಜೋಳ - ಬೆಳಗಾವಿ

ಕೆ.ಎಸ್. ಈಶ್ವರಪ್ಪ - ಚಿಕ್ಕಮಗಳೂರು

ಬಿ. ಶ್ರೀರಾಮುಲು - ಬಳ್ಳಾರಿ 

ವಿ. ಸೋಮಣ್ಣ - ಚಾಮರಾಜನಗರ

ಉಮೇಶ್ ವಿ. ಕತ್ತಿ - ವಿಜಯಪುರ 

ಎಸ್. ಅಂಗಾರ - ಉಡುಪಿ 

ಆರಗ ಜ್ಞಾನೇಂದ್ರ - ತುಮಕೂರು 

ಡಾ. ಸಿ.ಎನ್. ಅಶ್ವತ್ಥ ನಾರಾಯಣ - ರಾಮನಗರ 

ಸಿ.ಸಿ. ಪಾಟೀಲ್ - ಬಾಗಲಕೋಟೆ 

ಆನಂದ್ ಸಿಂಗ್ - ಕೊಪ್ಪಳ 

ಕೋಟಾ ಶ್ರೀನಿವಾಸ ಪೂಜಾರಿ - ಉತ್ತರ ಕನ್ನಡ 

ಪ್ರಭು ಚೌವ್ಹಾಣ್ - ಯಾದಗಿರಿ 

ಮುರುಗೇಶ್ ನಿರಾಣಿ - ಕಲಬುರಗಿ 

ಶಿವರಾಮ್ ಹೆಬ್ಬಾರ್ - ಹಾವೇರಿ 

ಎಸ್.ಟಿ. ಸೋಮಶೇಖರ್ - ಮೈಸೂರು 

ಬಿ.ಸಿ. ಪಾಟೀಲ್ - ಚಿತ್ರದುರ್ಗ ಮತ್ತು ಗದಗ 

ಬಿ.ಎ. ಬಸವರಾಜ - ದಾವಣಗೆರೆ 

ಡಾ. ಕೆ. ಸುಧಾಕರ್ - ಬೆಂಗಳೂರು ಗ್ರಾಮಾಂತರ 

ಕೆ. ಗೋಪಾಲಯ್ಯ - ಹಾಸನ ಮತ್ತು ಮಂಡ್ಯ 

ಶಶಿಕಲಾ ಜೊಲ್ಲೆ - ವಿಜಯನಗರ 

ಎಂಟಿಬಿ ನಾಗರಾಜ್ - ಚಿಕ್ಕಬಳ್ಳಾಪುರ 

ಕೆ.ಸಿ. ನಾರಾಯಣ ಗೌಡ - ಶಿವಮೊಗ್ಗ 

ಬಿ.ಸಿ. ನಾಗೇಶ್ - ಕೊಡಗು 

ವಿ. ಸುನೀಲ್ ಕುಮಾರ್ - ದಕ್ಷಿಣ ಕನ್ನಡ 

ಹಾಲಪ್ಪ ಆಚಾರ್ - ಧಾರವಾಡ 

ಶಂಕರ್ ಬಿ. ಮುನೇನಕೊಪ್ಪ - ರಾಯಚೂರು ಮತ್ತು ಬೀದರ್ 

ಮುನಿರತ್ನ - ಕೋಲಾರ



  • Blogger Comments
  • Facebook Comments

0 comments:

Post a Comment

Item Reviewed: 5 ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿಗಳ ಪಟ್ಟಿ ಘೋಷಿಸಿದ ಸಿಎಂ ಬೊಮ್ಮಾಯಿ : ದಕ್ಷಿಣ ಕನ್ನಡಕ್ಕೆ ಸುನಿಲ್ ಕುಮಾರ್, ಅಂಗಾರಗೆ ಉಡುಪಿ, ಕೋಟಾಗೆ ಉತ್ತರ ಕನ್ನಡ ಉಸ್ತುವಾರಿ Rating: 5 Reviewed By: karavali Times
Scroll to Top