ಸಾಮಾಜಿಕ‌ ಕ್ರಾಂತಿಯ ಹರಿಕಾರ ಬಸವಣ್ಣ : ಡಿ ಟಿ ರಾಜೇಶ್ ನಾಯಕ್  - Karavali Times ಸಾಮಾಜಿಕ‌ ಕ್ರಾಂತಿಯ ಹರಿಕಾರ ಬಸವಣ್ಣ : ಡಿ ಟಿ ರಾಜೇಶ್ ನಾಯಕ್  - Karavali Times

728x90

3 May 2022

ಸಾಮಾಜಿಕ‌ ಕ್ರಾಂತಿಯ ಹರಿಕಾರ ಬಸವಣ್ಣ : ಡಿ ಟಿ ರಾಜೇಶ್ ನಾಯಕ್ 

 ಬಂಟ್ವಾಳ, ಮೇ 03, 2022 (ಕರಾವಳಿ ಟೈಮ್ಸ್) : ಬಸವಣ್ಣನವರು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ. ಅವರು ಸಾಮಾಜಿಕ ತಾರತಮ್ಯ, ಲಿಂಗ ತಾರತಮ್ಯ, ಮೂಢನಂಬಿಕೆಗಳ ವಿರುದ್ಧ ಹೋರಾಡಿ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಿದವರು. ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವನ್ನು ಹರಡಿದರು ಎಂದು ಬಂಟ್ವಾಳ ತಾಲೂಕು ಕಚೇರಿ ಉಪತಹಶೀಲ್ದಾರ್ ರಾಜೇಶ್ ನಾಯಕ್ ಹೇಳಿದರು. 

 ತಾಲೂಕು ರಾಷ್ಚ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಿ ಸಿ ರೋಡು ಮಿನಿ ವಿಧಾನಸೌಧಲ್ಲಿ ಮಂಗಳವಾರ ಆಚರಿಸಲಾದ ಬಸವ‌ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

 ಈ ಸಂದರ್ಭ ತಾಲೂಕು ಪಂಚಾಯತ್ ವ್ಯವಸ್ಥಾಪಕಿ ಶಾಂಭವಿ, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ಸ್ವಾಗತಿಸಿ, ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಸಾಮಾಜಿಕ‌ ಕ್ರಾಂತಿಯ ಹರಿಕಾರ ಬಸವಣ್ಣ : ಡಿ ಟಿ ರಾಜೇಶ್ ನಾಯಕ್  Rating: 5 Reviewed By: karavali Times
Scroll to Top