ಕೆಲಸದಿಂದ ವಜಾ ಮಾಡಿದ ಅಕ್ಷರ ದಾಸೋಹ ಸಿಬ್ಬಂದಿ ಯಶೋಧಾರನ್ನು ಮರು ನೇಮಕ ಮಾಡದಿದ್ದಲ್ಲಿ ಅನಿರ್ಧಿಷ್ಟಾವಧಿ ಧರಣಿ : ರಾಮಣ್ಣ ವಿಟ್ಲ ಎಚ್ಚರಿಕೆ - Karavali Times ಕೆಲಸದಿಂದ ವಜಾ ಮಾಡಿದ ಅಕ್ಷರ ದಾಸೋಹ ಸಿಬ್ಬಂದಿ ಯಶೋಧಾರನ್ನು ಮರು ನೇಮಕ ಮಾಡದಿದ್ದಲ್ಲಿ ಅನಿರ್ಧಿಷ್ಟಾವಧಿ ಧರಣಿ : ರಾಮಣ್ಣ ವಿಟ್ಲ ಎಚ್ಚರಿಕೆ - Karavali Times

728x90

27 June 2023

ಕೆಲಸದಿಂದ ವಜಾ ಮಾಡಿದ ಅಕ್ಷರ ದಾಸೋಹ ಸಿಬ್ಬಂದಿ ಯಶೋಧಾರನ್ನು ಮರು ನೇಮಕ ಮಾಡದಿದ್ದಲ್ಲಿ ಅನಿರ್ಧಿಷ್ಟಾವಧಿ ಧರಣಿ : ರಾಮಣ್ಣ ವಿಟ್ಲ ಎಚ್ಚರಿಕೆ

ಬಂಟ್ವಾಳ, ಜೂನ್ 27, 2023 (ಕರಾವಳಿ ಟೈಮ್ಸ್) : ರಾಜಕೀಯ ಪ್ರೇರಿತವಾಗಿ ಕೆಲಸದಿಂದ ವಜಾಗೊಳಿಸಿದ ಅಕ್ಷರ ದಾಸೋಹ ಸಿಬ್ಬಂದಿ ಶ್ರೀಮತಿ ಯಶೋಧ ಅವರನ್ನು ಜುಲೈ 10ರೊಳಗೆ ಮರು ನೇಮಕಗೊಳಿಸದಿದ್ದಲ್ಲಿ  ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಐಸಿಸಿಟಿಯು ಮುಖಂಡ ಎ ರಾಮಣ್ಣ ವಿಟ್ಲ ಎಚ್ಚರಿಸಿದರು. 

ಸರಕಾರದ ನಿಯಮಾನುಸಾರ ಆಯ್ಕೆಯಾಗಿ ಉಳಿ ಗ್ರಾಮದ ಉಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ನೌಕರರಾಗಿ ಕೆಲಸ ಮಾಡುತ್ತಿದ್ದ ಶ್ರೀಮತಿ ಯಶೋಧ ಕೋಂ ಮಹಾಬಲ ಪೂಜಾರಿ ಅವರನ್ನು ರಾಜಕೀಯ ಪ್ರೇರಿತವಾಗಿ ವಜಾ ಮಾಡಿರುವ ಪ್ರಕರಣ ಖಂಡಿಸಿ ಮಂಗಳವಾರ (ಜೂನ್ 27) ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು ಯಶೋದಾ ಅವರು ಉಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಅಡುಗೆ ಸಿಬ್ಬಂದಿಯಾಗಿ ಸರಕಾರದ ನಿಯಮಾನುಸಾರವಾಗಿ ಆಯ್ಕೆಯಾಗಿ ಬಿಸಿಯೂಟ ನೌಕರರಾಗಿ ಕೆಲಸವನ್ನು ಮಾಡಿಕೊಂಡು ಬಂದಿರುತ್ತಾರೆ. 2023-24ನೇ ಸಾಲಿನಲ್ಲಿ ಮೇ 30 ಹಾಗೂ 31 ರಂದು ಎಂದಿನಂತೆ ಕೆÀಲಸಕ್ಕೆ ಅವರು ಹಾಜರಾಗಿರುತ್ತಾರೆ, ಮೇ 31 ರಂದು ಮಧ್ಯಾಹ್ನ  ಉಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಯಶೋಧರವರನ್ನು ಕೆಲಸದಿಂದ ವಜಾ ಮಾಡಬೇಕೆಂದು ತಿಳಿಸಿರುತ್ತಾರೆಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಯಶೋಧ ರವರು ಮೌಖಿಕವಾಗಿ ದೂರು ನೀಡಿರುತ್ತಾರೆ, ಆದರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಅಲ್ಲದೆ ಸರಕಾರದ ನಿಯಮವನ್ನು ಪಾಲಿಸದೆ ಏಕಾಏಕಿ ಶಾಲೆಯ ಬಿಸಿಯೂಟ ಕೆಲಸದಿಂದ ಕಾನೂನು ಬಾಹಿರವಾಗಿ ವಜಾ ಮಾಡಿರುತ್ತಾರೆ. ಈ ಬಗ್ಗೆ  ಅಕ್ಷರ ದಾಸೋಹ ನೌಕರರ ಸಂಘ ಎಐಸಿಸಿಟಿಯು ವತಿಯಿಂದ ಜೂನ್ 14 ರಂದು ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಲಾಗಿದೆ. ಆದರೂ ಈ ಬಗ್ಗೆ ಯಶೋಧ ಅವರ ಸಮಕ್ಷಮ ಯಾವುದೇ ತನಿಖೆ ಕೈಗೊಳ್ಳದೆ ರಾಜಕೀಯ ಪ್ರಭಾವದಿಂದ ಕೆಲಸದಿಂದ ವಜಾ ಮಾಡಲಾಗಿರುತ್ತದೆ ಎಂದವರು ಆರೋಪಿಸಿದರು. 

ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಜಯಶ್ರೀ, ಕಾರ್ಯದರ್ಶಿ ವೀಣಾ, ಪ್ರಮುಖರಾದ ರಾಜಾ ಚೆಂಡ್ತಿಮಾರ್, ಜಯಮತಿ, ಕೃಷ್ಣಪ್ಪ ಪುದ್ದೋಟ್ಟು, ಸುರೇಂದ್ರ ಕೋಟ್ಯಾನ್, ಇಬ್ರಾಹಿಂ ಮೈಂದಾಳ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕೆಲಸದಿಂದ ವಜಾ ಮಾಡಿದ ಅಕ್ಷರ ದಾಸೋಹ ಸಿಬ್ಬಂದಿ ಯಶೋಧಾರನ್ನು ಮರು ನೇಮಕ ಮಾಡದಿದ್ದಲ್ಲಿ ಅನಿರ್ಧಿಷ್ಟಾವಧಿ ಧರಣಿ : ರಾಮಣ್ಣ ವಿಟ್ಲ ಎಚ್ಚರಿಕೆ Rating: 5 Reviewed By: karavali Times
Scroll to Top