ಬಂಟ್ವಾಳದಲ್ಲೂ ಸೌಜನ್ಯ ಪರ ಧ್ವನಿ : ಆಗಸ್ಟ್ 27 ರಂದು ವಾಮಪದವಿನಲ್ಲಿ ತಿಮರೋಡಿ ಉಪಸ್ಥಿತಿಯಲ್ಲಿ ಬೃಹತ್ ಪ್ರತಿಭಟನಾ ಸಭೆ - Karavali Times ಬಂಟ್ವಾಳದಲ್ಲೂ ಸೌಜನ್ಯ ಪರ ಧ್ವನಿ : ಆಗಸ್ಟ್ 27 ರಂದು ವಾಮಪದವಿನಲ್ಲಿ ತಿಮರೋಡಿ ಉಪಸ್ಥಿತಿಯಲ್ಲಿ ಬೃಹತ್ ಪ್ರತಿಭಟನಾ ಸಭೆ - Karavali Times

728x90

13 August 2023

ಬಂಟ್ವಾಳದಲ್ಲೂ ಸೌಜನ್ಯ ಪರ ಧ್ವನಿ : ಆಗಸ್ಟ್ 27 ರಂದು ವಾಮಪದವಿನಲ್ಲಿ ತಿಮರೋಡಿ ಉಪಸ್ಥಿತಿಯಲ್ಲಿ ಬೃಹತ್ ಪ್ರತಿಭಟನಾ ಸಭೆ

ಬಂಟ್ವಾಳ, ಆಗಸ್ಟ್ 13, 2023 (ಕರಾವಳಿ ಟೈಮ್ಸ್) :  11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ನೈಜ್ಯ ಆರೋಪಿಯನ್ನು ಬಂಧಿಸಬೇಕೆಂದು ಎಲ್ಲೆಡೆ ಪ್ರತಿಭಟನಾ ಕೂಗು ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಆಗಸ್ಟ್ 27 ರಂದು ವಾಮದಪದವಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರ ಉಪಸ್ಥಿತಿಯಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ.

ಬೆಳಿಗ್ಗೆ 9 ಗಂಟೆಗೆ ವಾಮದಪದವು ನೀಲಿ ನೀಲಕಂಠೇಶ್ವರ ದೇವಸ್ಥಾನದಿಂದ ವಾಹನ ಜಾಥ ಹೊರಟು ಮಾವಿನಕಟ್ಟೆ ಕೇಂದ್ರ ಮೈದಾನದಲ್ಲಿ ಸೌಜನ್ಯ ಸಾವಿನ ಪೂರ್ಣ ಪ್ರಮಾಣದ ತನಿಖೆಗೆ ಹೋರಾಟ ನಡೆಯಲಿದೆ ಎಂದು ವಾಮದಪದವು ಹೋರಾಟ ಸಮಿತಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲೂ ಸೌಜನ್ಯ ಪರ ಧ್ವನಿ : ಆಗಸ್ಟ್ 27 ರಂದು ವಾಮಪದವಿನಲ್ಲಿ ತಿಮರೋಡಿ ಉಪಸ್ಥಿತಿಯಲ್ಲಿ ಬೃಹತ್ ಪ್ರತಿಭಟನಾ ಸಭೆ Rating: 5 Reviewed By: karavali Times
Scroll to Top