ಇರಾ ಸೋಮನಾಥೇಶ್ವರ ದೇವಸ್ಥಾನಕ್ಕೆ ಅಗತ್ಯ ಅನುದಾನಕ್ಕೆ ಕ್ರಮ : ಸ್ಪೀಕರ್ ಯು ಟಿ ಖಾದರ್ ಭರವಸೆ - Karavali Times ಇರಾ ಸೋಮನಾಥೇಶ್ವರ ದೇವಸ್ಥಾನಕ್ಕೆ ಅಗತ್ಯ ಅನುದಾನಕ್ಕೆ ಕ್ರಮ : ಸ್ಪೀಕರ್ ಯು ಟಿ ಖಾದರ್ ಭರವಸೆ - Karavali Times

728x90

1 August 2023

ಇರಾ ಸೋಮನಾಥೇಶ್ವರ ದೇವಸ್ಥಾನಕ್ಕೆ ಅಗತ್ಯ ಅನುದಾನಕ್ಕೆ ಕ್ರಮ : ಸ್ಪೀಕರ್ ಯು ಟಿ ಖಾದರ್ ಭರವಸೆ

ಬಂಟ್ವಾಳ, ಆಗಸ್ಟ್ 01, 2023 (ಕರಾವಳಿ ಟೈಮ್ಸ್) : ತಾಲೂಕಿನ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಕರ್ನಾಟಕ ವಿಧಾನ ಸಭಾ ಸ್ಪೀಕರ್, ಮಂಗಳೂರು ಶಾಸಕ ಯು ಟಿ ಖಾದರ್ ಭಾನುವಾರ ಭೇಟಿ ನೀಡಿ ಇಲ್ಲಿನ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿದ್ದು, ಮನವಿ ಸ್ವೀಕರಿಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ಸಂಬAಧಪಟ್ಟ ಇಲಾಖೆಗಳ ಮೂಲಕ ಪೂರಕವಾದ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. 



ಈ ಸಂದರ್ಭ ಇರಾ ಗ್ರಾ ಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ, ಸದಸ್ಯ ಪ್ರತಾಪ್ ಚಂದ್ರ, ನರಿಂಗಾನ ಗ್ರಾಮ ಪಂಚಾಯತ್ ಸದಸ್ಯ ಮುರಳಿಧರ ಶೆಟ್ಟಿ ಮೋರ್ಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕಾಧ್ಯಕ್ಷ ಅನಿಲ್ ಕುಮಾರ್ ಸೂತ್ರಬೈಲು, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರಾದ ಜಗದೀಶ್ ರೈ ಗುತ್ತು, ವೈ ಬಿ ಸುಂದರ್, ಜಯರಾಮ ಪೂಜಾರಿ ಸಂಪಿಲ, ಪ್ರಮುಖರಾದ ಸುಖೇಶ್ ಭಂಡಾರಿ, ಪ್ರೆಸೀನ್ ಶೆಟ್ಟಿ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಇರಾ ಸೋಮನಾಥೇಶ್ವರ ದೇವಸ್ಥಾನಕ್ಕೆ ಅಗತ್ಯ ಅನುದಾನಕ್ಕೆ ಕ್ರಮ : ಸ್ಪೀಕರ್ ಯು ಟಿ ಖಾದರ್ ಭರವಸೆ Rating: 5 Reviewed By: karavali Times
Scroll to Top