ಕಡೆಗೋಳಿ : ಹೆದ್ದಾರಿ ಡಿವೈಡರ್ ಮೇಲೇರಿ ಕಾರ್ಮಿಕ ಸಹಿತ ಕಾರು ಹಾಗೂ ಸ್ಕೂಟರಿಗೆ ಡಿಕ್ಕಿ ಹೊಡೆದ ಕಾರು, ಇಬ್ಬರು ಆಸ್ಪತ್ರೆಗೆ - Karavali Times ಕಡೆಗೋಳಿ : ಹೆದ್ದಾರಿ ಡಿವೈಡರ್ ಮೇಲೇರಿ ಕಾರ್ಮಿಕ ಸಹಿತ ಕಾರು ಹಾಗೂ ಸ್ಕೂಟರಿಗೆ ಡಿಕ್ಕಿ ಹೊಡೆದ ಕಾರು, ಇಬ್ಬರು ಆಸ್ಪತ್ರೆಗೆ - Karavali Times

728x90

20 September 2023

ಕಡೆಗೋಳಿ : ಹೆದ್ದಾರಿ ಡಿವೈಡರ್ ಮೇಲೇರಿ ಕಾರ್ಮಿಕ ಸಹಿತ ಕಾರು ಹಾಗೂ ಸ್ಕೂಟರಿಗೆ ಡಿಕ್ಕಿ ಹೊಡೆದ ಕಾರು, ಇಬ್ಬರು ಆಸ್ಪತ್ರೆಗೆ

ಬಂಟ್ವಾಳ, ಸೆಪ್ಟೆಂಬರ್ 20, 2023 (ಕರಾವಳಿ ಟೈಮ್ಸ್) : ತಾಲೂಕಿನ ತುಂಬೆ ಗ್ರಾಮದ ಕಡೆಗೋಳಿ ಎಂಬಲ್ಲಿ ಕಾರೊಂದು ಹೆದ್ದಾರಿ ಡಇವೈಡರ್ ಮೇಲೇರಿ ಹುಲ್ಲು ತೆಗೆಯುತ್ತಿದ್ದ ಕಾರ್ಮಿಕನಿಗೆ ಡಿಕ್ಕಿ ಹೊಡೆದು ಬಳಿಕ ಡಿವೈಡರ್ ದಾಟಿ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಕಾರು ಹಾಗೂ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್ಮಿಕ ಹಾಗೂ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. 

ಗಾಯಗೊಂಡವರನ್ನು ಹೆದ್ದಾರಿ ಡಿವೈಡರ್ ಮೇಲಿನ ಹುಲ್ಲು ತೆಗೆಯುತ್ತಿದ್ದ ಕಾರ್ಮಿಕ ಹಾವೇರಿ ಜಿಲ್ಲೆಯ ನೆಲ್ಲಗಲ್ಲು ಗ್ರಾಮದ ನಿವಾಸಿ ನಾಗರಾಜ ಶಿವಪ್ಪ ಲಮಾಣಿ (29) ಹಾಗೂ ಸ್ಕೂಟರ್ ಸವಾರ ಜಸೀಂ ಎಂದು ಹೆಸರಿಸಲಾಗಿದೆ. 

ಸೋಮವಾರ ಸಂಜೆ ವೇಳೆ ಕಾರ್ಮಿಕ ನಾಗರಾಜ ಅವರು ಗುತ್ತಿಗೆದಾರ ಸೆಫಿಯುಲ್ಲ ಅವರ ಜೊತೆ ತುಂಬೆ ಗ್ರಾಮದ ಕಡೆಗೋಳಿ ಎಂಬಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮೇಲೆ ಬೆಳೆದ ಹುಲ್ಲು ತೆಗೆಯುತ್ತಿದ್ದಾಗ, ಏಕಾಏಕಿ ಬಂದ ಕಾರು ಚಾಲಕನ ನಿರ್ಲಕ್ಷ್ಯತನದಿಂದ ಡಿವೈಡರ್ ಮೇಲೇರಿ ಬಂದು ನಾಗರಾಜ ಅವರಿಗೆ ಡಿಕ್ಕಿ ಹೊಡೆದು ಬಳಿಕ, ಡಿವೈಡರ್ ದಾಟಿ ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಆಲ್ಟೋ ಕಾರು ಹಾಗೂ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಸರಣಿ ಅಪಘಾತ ನಡೆದಿದೆ. 

ಅಪಘಾತದಿಂದ ಗಾಯಗೊಂಡ ಕಾರ್ಮಿಕ ಹಾಗೂ ಸ್ಕೂಟರ್ ಸವಾರರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಡೆಗೋಳಿ : ಹೆದ್ದಾರಿ ಡಿವೈಡರ್ ಮೇಲೇರಿ ಕಾರ್ಮಿಕ ಸಹಿತ ಕಾರು ಹಾಗೂ ಸ್ಕೂಟರಿಗೆ ಡಿಕ್ಕಿ ಹೊಡೆದ ಕಾರು, ಇಬ್ಬರು ಆಸ್ಪತ್ರೆಗೆ Rating: 5 Reviewed By: karavali Times
Scroll to Top