ಉಜಿರೆ : ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ನಡುವೆ ಚಕಮಕಿ, ತಂದೆಯ ಚೂರಿ ಇರಿತಕ್ಕೆ ಮಗನ ದಾರುಣ ಅಂತ್ಯ - Karavali Times ಉಜಿರೆ : ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ನಡುವೆ ಚಕಮಕಿ, ತಂದೆಯ ಚೂರಿ ಇರಿತಕ್ಕೆ ಮಗನ ದಾರುಣ ಅಂತ್ಯ - Karavali Times

728x90

30 October 2023

ಉಜಿರೆ : ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ನಡುವೆ ಚಕಮಕಿ, ತಂದೆಯ ಚೂರಿ ಇರಿತಕ್ಕೆ ಮಗನ ದಾರುಣ ಅಂತ್ಯ

ಬೆಳ್ತಂಗಡಿ, ಅಕ್ಟೋಬರ್ 30, 2023 (ಕರಾವಳಿ ಟೈಮ್ಸ್) : ತಂದೆ ಹಾಗೂ ಮಗನ ನಡುವೆ ಮಾತಿನ ಚಕಮಕಿ ನಡೆದು ಬಳಿಕ ತಂದೆಯ ಚೂರಿ ಇರಿತಕ್ಕೆ ಮಗ ದಾರುಣವಾಗಿ ಬಲಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. 

ತಂದೆಯ ಚೂರಿ ಇರಿತಕ್ಕೆ ಬಲಿಯಾದ ಪುತ್ರನನ್ನು ಜಗದೀಶ್ (30) ಎಂದು ಹೆಸರಿಸಲಾಗಿದ್ದು, ಆರೋಪಿ ತಂದೆಯನ್ನು ಕೃಷ್ಣಯ್ಯ ಆಚಾರ್ಯ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಸಹೋದರ ಗಣೇಶ  ಕೆ (33) ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು, ಭಾನುವಾರ (ಅ 29) ರಾತ್ರಿ ತಂದೆ ಕೃಷ್ಣಯ್ಯ ಆಚಾರ್ಯ ಹಾಗೂ ತಮ್ಮ ಜಗದೀಶನ ನಡುವೆ ಮಾತಿನ ಜಗಳವಾಗುತ್ತಿದ್ದು, ತಂದೆಯವರು ಮನೆಯ ಒಳಗಡೆ ಕೋಣೆಗೆ ಹೋಗಿ ಬಾಗಿಲು ಹಾಕಿ ಕೊಂಡಾಗ, ತಮ್ಮ ಜಗದೀಶನು ಆತನ ವೈದ್ಯಕೀಯ ಚಿಕಿತ್ಸೆಯ ದಾಖಲೆಗಳನ್ನು ಕೊಡುವಂತೆ  ಕೇಳಿ  ತಂದೆಯವರು ಮಲಗಿದ್ದ ಕೋಣೆಯ ಬಾಗಿಲನ್ನು ಕಾಲಿನಿಂದ ತುಳಿದು ಒಡೆದು ಒಳಗಡೆ ಹೋಗಲು ಪ್ರಯತ್ನಿಸುತ್ತಿದ್ದಾಗ, ತಂದೆಯವರು ಅಲ್ಲಿದ್ದ ಚೂರಿಯಿಂದ ತಮ್ಮನ ಭುಜಕ್ಕೆ ಹಾಗೂ ಎದೆಗೆ ಚೂರಿಯಿಂದ ಇರಿದಿದ್ದಾರೆ. ಇರಿತದಿಂದ ಗಂಭೀರ ಗಾಯಗೊಂಡ ಜಗದೀಶನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.. ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 107/2023 ಕಲಂ 302 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಉಜಿರೆ : ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ನಡುವೆ ಚಕಮಕಿ, ತಂದೆಯ ಚೂರಿ ಇರಿತಕ್ಕೆ ಮಗನ ದಾರುಣ ಅಂತ್ಯ Rating: 5 Reviewed By: karavali Times
Scroll to Top