ಬಂಟ್ವಾಳ, ನವೆಂಬರ್ 09, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಕಸಬಾ ಗ್ರಾಮದ ನಿವಾಸಿ ನೌಷಾದ್ (35) ಎಂಬವರನ್ನು ಪಂಚಾಯಿತಿಗೆ ನೆಪದಲ್ಲಿ ಕಾರಿನಲ್ಲಿ ಕರೆದುಕೊಂಡು ಹೋದ ತಂಡ ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೌಶಾದ್ ಅವರು ನ 6 ರಂದು ತನ್ನ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ವೇಳೆ ತುಂಬ್ಯ ಜಂಕ್ಷನ್ ಎಂಬಲ್ಲಿ ತಲುಪಿದಾಗ ಹಿಂದಿನಿಂದ ಬಂದ ಕಾರು ಸ್ಕೂಟರಿಗೆ ಅಡ್ಡ ನಿಲ್ಲಿಸಿ ಅದರೊಳಗಿದ್ದ ನೌಶಾದ್ ಅವರ ಹೆಂಡತಿ ಕಡೆಯ ಜುನೈದ್ ಹಾಗೂ ಇತರರು ಬಂದು ನಿನ್ನ ಹೆಂಡತಿಯ ವಿಷಯದಲ್ಲಿ ಮಾತನಾಡಲಿಕ್ಕಿದೆ ಎಂದು ಕಲಾಯಿ ಮನೆಗೆ ಬರುವಂತೆ ತಿಳಿಸಿ ಒತ್ತಾಯದಿಂದ ಕಾರಿನಲ್ಲಿ ಕುಳ್ಳಿರಿಸಿ, ನೌಶಾದ್ ಅವರ ಹೆಂಡತಿಯ ಅಣ್ಣ ಇದ್ದಿಮೋನು ಎಂಬವರ ಮನೆಗೆ ಕರೆದುಕೊಂಡು ಹೋಗಿರುತ್ತಾರೆ. ಅಲ್ಲಿ ಆರೋಪಿಗಳಾದ ಕಲಂದರ್ ಹಾಗೂ ತಮೀಮ್ ಎಂಬವರು ನೌಶಾದನಿಗೆ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಬಳಿಕ ಅದೇ ಕಾರಿನಲ್ಲಿ ನೌಶಾದನನ್ನು ಬಲವಂತವಾಗಿ ಕುಳ್ಳಿರಿಸಿ ಅಲ್ಲಿಂದ ಅಡ್ಡೂರಿನಲ್ಲಿರುವ ಹೆಂಡತಿಯ ಅಣ್ಣ ಯಾಕೂಬ್ ಎಂಬವರ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಅವರ ಮಕ್ಕಳಾದ ಜುನೈದ್, ಮನ್ಸೂರು, ಇಮ್ಮಿಯಾಜ್ ಹಾಗೂ ಸ್ನೇಹಿತರು ಮರದ ದೊಣ್ಣೆಯಿಂದ ಹಲ್ಲೆ ಮಾಡಿ, ಜುನೈದ್ ಎಂಬಾತನು ನೌಶಾದನಿಗೆ ಅವ್ಯಾಚವಾಗಿ ಬೈದು, ಜೀವ ಬೆದರಿಕೆ ಹಾಕಿ ರೂಮಿನಲ್ಲಿ ಕೂಡಿ ಹಾಕಿರುತ್ತಾರೆ. ಬಳಿಕ ನೌಶಾದ್ ಅಲ್ಲಿಂದ ತಪ್ಪಿಸಿಕೊಂಡು ಬಂದಿರುತ್ತಾರೆ ಎಂದು ನೌಶಾದ್ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 132/2023 ಕಲಂ 363, 323, 504, 324, 341, 342, 506 ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment