ಪಾಣಾಜೆ : ಗೋಡೌನ್ ಬೀಗ ಮುರಿದು ಅಡಿಕೆ ಕಳವುಗೈದ ಖದೀಮರು - Karavali Times ಪಾಣಾಜೆ : ಗೋಡೌನ್ ಬೀಗ ಮುರಿದು ಅಡಿಕೆ ಕಳವುಗೈದ ಖದೀಮರು - Karavali Times

728x90

24 November 2023

ಪಾಣಾಜೆ : ಗೋಡೌನ್ ಬೀಗ ಮುರಿದು ಅಡಿಕೆ ಕಳವುಗೈದ ಖದೀಮರು

ಪುತ್ತೂರು, ನವೆಂಬರ್ 24, 2023 (ಕರಾವಳಿ ಟೈಮ್ಸ್) : ಗೋಡೌನ್ ಬೀಗ ಮುರಿದು ಸುಲಿದ ಅಡಿಕೆ ಕಳ್ಳತನಗೈದ ಘಟನೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದಲ್ಲಿ ಗುರುವಾರ ಬೆಳಕಿಗೆ ಬಂದಿದೆ. 

ಪಾಣಾಜೆ ನಿವಾಸಿ ಅಬ್ದುಲ್ ಬುರ್‍ಹಾನ್ (47) ಅವರು ನ 22 ರಂದು ಸುಲಿದ ಅಡಿಕೆಗಳನ್ನು ಗೋಣಿ ಚೀಲದಲ್ಲಿ ತುಂಬಿಸಿಟ್ಟು ಗೋಡೌನಿಗೆ ಬೀಗ ಹಾಕಿ ತೆರಳಿದ್ದರು. ಮರುದಿನ ನೋಡುವಾಗ ಗೋಡೌನಿನ ಲಾಕ್ ಮುರಿದು ಶಟರ್ ಮುರಿದು ಒಳಪ್ರವೇಶಿಸಿದ ಕಳ್ಳರು ಸುಮಾರು 90 ಸಾವಿರ ರೂಪಾಯಿ ಮೌಲ್ಯದ 2.90 ಕ್ವಿಂಟಾಲ್ ಅಡಿಕೆಯನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. 

ಈ ಬಗ್ಗೆ ಬುರ್‍ಹಾನ್ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪಾಣಾಜೆ : ಗೋಡೌನ್ ಬೀಗ ಮುರಿದು ಅಡಿಕೆ ಕಳವುಗೈದ ಖದೀಮರು Rating: 5 Reviewed By: karavali Times
Scroll to Top