ನೆಲ್ಲಿಗುಡ್ಡೆ : ನಾಯಿ ಕಚ್ಚಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಕತ್ತಿಯಿಂದ ಕಡಿದ ನಾಯಿಯ ಮಾಲಿಕ - Karavali Times ನೆಲ್ಲಿಗುಡ್ಡೆ : ನಾಯಿ ಕಚ್ಚಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಕತ್ತಿಯಿಂದ ಕಡಿದ ನಾಯಿಯ ಮಾಲಿಕ - Karavali Times

728x90

15 December 2023

ನೆಲ್ಲಿಗುಡ್ಡೆ : ನಾಯಿ ಕಚ್ಚಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಕತ್ತಿಯಿಂದ ಕಡಿದ ನಾಯಿಯ ಮಾಲಿಕ

ಬಂಟ್ವಾಳ, ಡಿಸೆಂಬರ್ 15, 2023 (ಕರಾವಳಿ ಟೈಮ್ಸ್) : ಸಾಕು ನಾಯಿ ಕಚ್ಚಿದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ನಾಯಿಯ ಮಾಲಕ ಮಾರಕಾಯುಧದಿಂದ ಕಡಿದ ಪ್ರಕರಣ ಕಾವಳಪಡೂರು ಗ್ರಾಮದ ಕಾವಳಕಟ್ಟೆ-ನೆಲ್ಲಿಗುಡ್ಡೆ ಸಮೀಪದ ಬಾರದಬೈಲು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. 

ಕಾವಳಪಡೂರು ನಿವಾಸಿ ಸಂತೋಷ್ ದೇವಾಡಿಗ ಎಂಬವರು ಬುಧವಾರ ರಾತ್ರಿ ಕಾವಳಕಟ್ಟೆಯಿಂದ ನೆಲ್ಲಿಗುಡ್ಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾರಬದಬೈಲು ಎಂಬಲ್ಲಿಗೆ ತಲುಪಿದಾಗ ಸ್ಥಳೀಯ ನಿವಾಸಿ ಶ್ರೀಧರ ಶೆಟ್ಟಿ ಅವರ ಮನೆಯ ನಾಯಿ ರಸ್ತೆಗೆ ಬಂದು ಸಂತೋಷ್ ಅವರ ಬಲಕಾಲಿಗೆ ಕಚ್ಚಿದೆ.

ಈ ಸಂದರ್ಭ ಸಂತೋಷ್ ದೇವಾಡಿಗ ಅವರು ಕಚ್ಚುವ ನಾಯಿಯನ್ನೇಕೆ ರಸ್ತೆಗೆ ಬಿಡುತ್ತೀರಿ ಎಂದು ಪ್ರಶ್ನಿಸಿದ್ದು, ಈ ವೇಳೆ ಶ್ರೀಧರ ಶೆಟ್ಟಿ ಬೈದು ಚೂರಿ ರೀತಿಯ ಕತ್ತಿಯಿಂದ ಸಂತೋಷ್ ದೇವಾಡಿಗ ಅವರಿಗೆ ಕಡಿದಿರುತ್ತಾರೆ. 

ಕಡಿತದಿಂದ ಗಾಯಗೊಂಡ ಸಂತೋಷ್ ದೇವಾಡಿಗ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ನೆಲ್ಲಿಗುಡ್ಡೆ : ನಾಯಿ ಕಚ್ಚಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಕತ್ತಿಯಿಂದ ಕಡಿದ ನಾಯಿಯ ಮಾಲಿಕ Rating: 5 Reviewed By: karavali Times
Scroll to Top