ಕಡಬ : ರಸ್ತೆ ದಾಟಲು ನಿಂತಿದ್ದ ಭಿನ್ನ ಚೇತನ ವ್ಯಕ್ತಿಯ ಮೈಮೇಲೆ ಕಾರು ಹರಿದು ದಾರುಣ ಸಾವು - Karavali Times ಕಡಬ : ರಸ್ತೆ ದಾಟಲು ನಿಂತಿದ್ದ ಭಿನ್ನ ಚೇತನ ವ್ಯಕ್ತಿಯ ಮೈಮೇಲೆ ಕಾರು ಹರಿದು ದಾರುಣ ಸಾವು - Karavali Times

728x90

16 December 2023

ಕಡಬ : ರಸ್ತೆ ದಾಟಲು ನಿಂತಿದ್ದ ಭಿನ್ನ ಚೇತನ ವ್ಯಕ್ತಿಯ ಮೈಮೇಲೆ ಕಾರು ಹರಿದು ದಾರುಣ ಸಾವು

ಕಡಬ, ಡಿಸೆಂಬರ್ 16, 2023 (ಕರಾವಳಿ ಟೈಮ್ಸ್) : ರಸ್ತೆ ದಾಟಲು ರಸ್ತೆಯಂಚಿನಲ್ಲಿ ನಿಂತಿದ್ದ ಭಿನ್ನಚೇತನ ವ್ಯಕ್ತಿಯ ಮೇಲೆ ಕಾರು ಹರಿದು ಮೃತಪಟ್ಟ ಘಟನೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿ ರಸ್ತೆಯ ಕಡಬ ಬಸ್ಸು ನಿಲ್ದಾಣ ಬಳಿ ಶುಕ್ರವಾರ ಸಂಜೆ ನಡೆದಿದೆ. 

ಮೃತ ಭಿನ್ನಚೇತನ ವ್ಯಕ್ತಿಯನ್ನು ಕಡಬ ನಿವಾಸಿ ಧರ್ಣಪ್ಪ ಎಂದು ಹೆಸರಿಸಲಾಗಿದೆ. ಧರ್ಣಪ್ಪ ಅವರು ರಸ್ತೆ ದಾಟಲು ಹೆದ್ದಾರಿ ಬದಿ ನಿಂತಿದ್ದ ವೇಳೆ ಅಭಿಷೇಕ್ ಬಾಂದಲ ಎಂಬವರು ಚಲಾಯಿಸುತ್ತಿದ್ದ ಕಾರು ಧರ್ಣಪ್ಪ ಅವರ ಮೈ ಮೇಲೆ ಹರಿದು ಗಂಭೀರ ಗಾಯಗೊಂಡಿದ್ದಾರೆ. 

ತಕ್ಷಣ ಅವರನ್ನು ಸ್ಥಳೀಯರು ಕಡಬ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತರ ಸಹೋದರ ಬೇಬಿ ಅವರು ನೀಡಿದ ದೂರಿನಂತೆ ಕಡಬ ಪೆÇಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಡಬ : ರಸ್ತೆ ದಾಟಲು ನಿಂತಿದ್ದ ಭಿನ್ನ ಚೇತನ ವ್ಯಕ್ತಿಯ ಮೈಮೇಲೆ ಕಾರು ಹರಿದು ದಾರುಣ ಸಾವು Rating: 5 Reviewed By: karavali Times
Scroll to Top