ಮಾಣಿ : ಮನೆ ತಡೆಗೋಡೆ ನಿರ್ಮಾಣಕ್ಕೆ ಪಾಯ ಅಗೆಯುವ ವೇಳೆ ಮಣ್ಣು ಕುಸಿತ : ಇಬ್ಬರು ಕಾರ್ಮಿಕರಿಗೆ ಗಾಯ - Karavali Times ಮಾಣಿ : ಮನೆ ತಡೆಗೋಡೆ ನಿರ್ಮಾಣಕ್ಕೆ ಪಾಯ ಅಗೆಯುವ ವೇಳೆ ಮಣ್ಣು ಕುಸಿತ : ಇಬ್ಬರು ಕಾರ್ಮಿಕರಿಗೆ ಗಾಯ - Karavali Times

728x90

29 December 2023

ಮಾಣಿ : ಮನೆ ತಡೆಗೋಡೆ ನಿರ್ಮಾಣಕ್ಕೆ ಪಾಯ ಅಗೆಯುವ ವೇಳೆ ಮಣ್ಣು ಕುಸಿತ : ಇಬ್ಬರು ಕಾರ್ಮಿಕರಿಗೆ ಗಾಯ

ಬಂಟ್ವಾಳ, ಡಿಸೆಂಬರ್ 29, 2023 (ಕರಾವಳಿ ಟೈಮ್ಸ್) :ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ಎಂಬಲ್ಲಿ ಜೆಸಿಂತಾ ಮಸ್ಕರೇನ್ಹಸ್ ಎಂಬವರ ಮನೆಯ ಮುಂಭಾಗ ತಡೆಗೋಡೆ ನಿರ್ಮಿಸಲು ಪಾಯ ಅಗೆಯುವ ಸಂದರ್ಭ ಮೈಮೇಲೆ ಮಣ್ಣು ಕುಸಿದು ಬಿದ್ದು ಇಬ್ಬರು ಕೂಲಿ ಕಾರ್ಮಿಕರು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ. 

ಗಾಯಾಳು ಕಾರ್ಮಿಕರನ್ನು ಉಮೇಶ ನಾಯ್ಕ (60) ಹಾಗೂ ರಾಜೇಶ್ ನಾಯ್ಕ (40) ಎಂದು ಗುರುತಿಸಲಾಗಿದ್ದು, ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಮಿಕರು ಅಪಾಯದಿಂದ ಪಾರಾಗಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾಣಿ : ಮನೆ ತಡೆಗೋಡೆ ನಿರ್ಮಾಣಕ್ಕೆ ಪಾಯ ಅಗೆಯುವ ವೇಳೆ ಮಣ್ಣು ಕುಸಿತ : ಇಬ್ಬರು ಕಾರ್ಮಿಕರಿಗೆ ಗಾಯ Rating: 5 Reviewed By: karavali Times
Scroll to Top