ಸಾಲೆತ್ತೂರು : ಅಕ್ರಮ ಮರಳು ಶೇಖರಣೆ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು, ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ, ಮೂವರ ವಿರುದ್ದ ಪ್ರಕರಣ ದಾಖಲು - Karavali Times ಸಾಲೆತ್ತೂರು : ಅಕ್ರಮ ಮರಳು ಶೇಖರಣೆ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು, ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ, ಮೂವರ ವಿರುದ್ದ ಪ್ರಕರಣ ದಾಖಲು - Karavali Times

728x90

5 December 2023

ಸಾಲೆತ್ತೂರು : ಅಕ್ರಮ ಮರಳು ಶೇಖರಣೆ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು, ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ, ಮೂವರ ವಿರುದ್ದ ಪ್ರಕರಣ ದಾಖಲು

ಬಂಟ್ವಾಳ, ಡಿಸೆಂಬರ್ 06, 2023 (ಕರಾವಳಿ ಟೈಮ್ಸ್) : ಕಳವು ಮಾಡಿಕೊಂಡು ಬಂದು ಅಕ್ರಮ ಮರಳು ದಾಸ್ತಾನು ಮಾಡಿದ್ದ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಮರಳನ್ನು ವಶಕ್ಕೆ ಪಡೆದುಕೊಂಡು ಮೂವರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ಸಾಲೆತ್ತೂರು ಎಂಬಲ್ಲಿ ಮಂಗಳವಾರ ಸಂಜೆ ನಡೆದಿರುವುದು ವರದಿಯಾಗಿದೆ. 

ಸಾಲೆತ್ತೂರು ಗ್ರಾಮದ ಬೊಳ್ಮಾರು ನಿವಾಸಿ ಸುದೇಶ್ ಭಂಡಾರಿ ಅವರ ಜಾಗದಲ್ಲಿ ಶೇಖರಿಸಿಟ್ಟ ಅಕ್ರಮ ಮರಳು ದಾಸ್ತಾನು ಸ್ಥಳಕ್ಕೆ ವಿಟ್ಲ ಪೊಲೀಸರ ತಂಡ ಮಂಗಳವಾರ ಸಂಜೆ ದಾಳಿ ನಡೆಸಿ ಪ್ರಕರಣ ಪತೆ ಹಚ್ಚಿದೆ. ಸ್ಥಳದಲ್ಲಿದ್ದ ಸುಮಾರು 1.25 ಲಕ್ಷ ರೂಪಾಯಿ ಮೌಲ್ಯದ 20 ರಿಂದ 25 ಲೋಡ್ ಅಕ್ರಮ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮರಳು ಅಕ್ರಮ ಶೇಖರಣೆ ಮಾಡಿರುವ ಆರೋಪಿಗಳಾದ ಸುದೇಶ್ ಭಂಡಾರಿ, ಶರೀಫ್ ಹಾಗೂ ನಾರಾಯಣ ಪೂಜಾರಿ ಎಂಬವರ ವಿರುದ್ದ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 203/2023 ಕಲಂ 379 ಆರ್/ಡಬ್ಲ್ಯು 34 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಾಲೆತ್ತೂರು : ಅಕ್ರಮ ಮರಳು ಶೇಖರಣೆ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು, ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ, ಮೂವರ ವಿರುದ್ದ ಪ್ರಕರಣ ದಾಖಲು Rating: 5 Reviewed By: karavali Times
Scroll to Top