ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಂಜೇಶ್ವರ ನಿವಾಸಿಯನ್ನು ದಸ್ತಗಿರಿ ಮಾಡಿದ ವಿಟ್ಲ ಪೊಲೀಸ್ - Karavali Times ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಂಜೇಶ್ವರ ನಿವಾಸಿಯನ್ನು ದಸ್ತಗಿರಿ ಮಾಡಿದ ವಿಟ್ಲ ಪೊಲೀಸ್ - Karavali Times

728x90

8 December 2023

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಂಜೇಶ್ವರ ನಿವಾಸಿಯನ್ನು ದಸ್ತಗಿರಿ ಮಾಡಿದ ವಿಟ್ಲ ಪೊಲೀಸ್

ಬಂಟ್ವಾಳ, ಡಿಸೆಂಬರ್ 09, 2023 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ಪ್ರಕರಣದಲ್ಲಿ  ಆರೋಪಿಯಾಗಿ, ನ್ಯಾಯಾಲಯದಿಂದ ಜಾಮೀನು ಪಡೆದು ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ, ಮಂಜೇಶ್ವರ-ಎಣ್ಮಕಜೆ ನಿವಾಸಿ ಗಿರೀಶ್ (38) ಎಂಬಾತನನ್ನು ಶುಕ್ರವಾರ (ಡಿ 8) ವಿಟ್ಲ ಪೊಲೀಸರ ತಂಡ ಕೇರಳ ಗಡಿ ಪ್ರದೇಶವಾದ ಅಡ್ಯನಡ್ಕ ಜಂಕ್ಷನ್ನಿನಿAದ ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ. ವಿಟ್ಲ ಠಾಣಾ ಎಎಸ್ಸೆöÊ ಜಯರಾಮ, ಸಿಬ್ಬಂದಿಗಳಾದ ಪುನೀತ್, ಹೇಮರಾಜ್, ಆಶೋಕ ಹಾಗೂ ವಿಠಲ ಅವರನ್ನೊಳಗೊಂಡ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಲಾಗಿದ್ದು, ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಂಜೇಶ್ವರ ನಿವಾಸಿಯನ್ನು ದಸ್ತಗಿರಿ ಮಾಡಿದ ವಿಟ್ಲ ಪೊಲೀಸ್ Rating: 5 Reviewed By: karavali Times
Scroll to Top