ಮೈಸೂರು : ಜನವರಿ 18 ರಂದು ಅಜ್ಮೀರ್ ಖ್ವಾಜಾ ಅನುಸ್ಮರಣೆ ‘ಖ್ವಾಜಾ ಕೀ ಛಟ್ಟಿ - Karavali Times ಮೈಸೂರು : ಜನವರಿ 18 ರಂದು ಅಜ್ಮೀರ್ ಖ್ವಾಜಾ ಅನುಸ್ಮರಣೆ ‘ಖ್ವಾಜಾ ಕೀ ಛಟ್ಟಿ - Karavali Times

728x90

15 January 2024

ಮೈಸೂರು : ಜನವರಿ 18 ರಂದು ಅಜ್ಮೀರ್ ಖ್ವಾಜಾ ಅನುಸ್ಮರಣೆ ‘ಖ್ವಾಜಾ ಕೀ ಛಟ್ಟಿ

ಮೈಸೂರು, ಜನವರಿ 15, 2024 (ಕರಾವಳಿ ಟೈಮ್ಸ್) : ಸಿಲ್ ಸಿಲಾ-ಎ-ಚಿಶ್ತಿಯಾ ಅಝೀಮಿಯಾ ಮೈಸೂರು ಇದರ ಆಶ್ರಯದಲ್ಲಿ ಜಗತ್ತಿನ ಶಾಂತಿ ಹಾಗೂ ಸಮೃದ್ದಿಗಾಗಿ ಪ್ರತಿ ವರ್ಷ ಆಚರಿಸಿಕೊಂಡು ಬರುವ ಹಝ್ರತ್ ಖ್ವಾಜಾ ಮುಯೀನುದ್ದೀನ್ ಚಿಸ್ತಿಯ್ಯಿಲ್ ಅಜ್ಮೀರಿ (ರ) ಅವರ ಅನುಸ್ಮರಣೆ “ಖ್ವಾಜಾ ಕೀ ಛಟ್ಟಿ” ಕಾರ್ಯಕ್ರಮವು ಜನವರಿ 18 ರಂದು ಗುರುವಾರ ಬೆಳಿಗ್ಗೆ 10.30 ರಿಂದ ಇಲ್ಲಿನ ಗೌಸಿಯಾ ನಗರದ ಎ ಬ್ಲಾಕ್, ಟಿ ಸಿ ಗಲ್ಲಿಯ ಆಸ್ತಾನೆ ಖ್ವಾಜಾ ಇಲ್ಲಿ ನಡೆಯಲಿದೆ. 

ಬೆಳಿಗ್ಗೆ 10.30ಕ್ಕೆ ಧ್ವಜಾರೋಹಣ, 11 ಗಂಟೆಗೆ ಗರೀಬ್ ನವಾಬ್ ಸಮ್ಮೇಳನ, ಮಧ್ಯಾಹ್ನ 1 ಗಂಟೆಗೆ ಪ್ರಾರ್ಥನಾ ಮಜ್ಲಿಸ್ ಬಳಿಕ ಅನ್ನದಾನ ಕಾರ್ಯಕ್ರಮ ನಡೆಯಲಿದೆ. 

ಖ್ವಾಜಾ ಅಝೀಂ ಅಲಿ ಶಾ ಚಿಶ್ತೀ ಮೈಸೂರು ಅವರು ಅಧ್ಯಕ್ಷತೆ ವಹಿಸುವರು. ಬಲ್ಹರಿ ಅಲಿ ಶಾ ಚಿಶ್ತಿ ದುವಾಶಿರ್ವಚನಗೈಯುವರು. ಕಾರ್ಯಕ್ರಮದಲ್ಲಿ ಮೈಸೂರು ಶ್ರೀ ಬಸವಧ್ಯಾನ ಮಂದಿರದ ಬಸವಲಿಂಗ ಮೂರ್ತಿ ಸ್ವಾಮೀಜಿ, ಸಾಮಾಜಿಕ ಕಾರ್ಯಕರ್ತ ಅಲಿ ಜನಾಬ್ ಅಝೀಝುಲ್ಲಾ (ಅಜ್ಜು) ಮೈಸೂರು, ಹಝ್ರತ್ ಅಝೀಝುಲ್ಲಾ ಶಾ ಚಿಶ್ತಿ, ಹಝ್ರತ್ ಮುಹಮ್ಮದ್ ರೂಹುಲ್ಲಾ ಶಾ ಶಿತಾರ್, ಹಝ್ರತ್ ಸಯ್ಯದ್  ಗೌಸ್ ಪೀರ್ ಶಾ ಖಾದ್ರಿ ಶಿತಾರಿ, ಹಝ್ರತ್ ಐಜಾಝ್ ಮಸ್ತಾನ್ ಶಾ ಹಾಫೀಝ್ ಖಾದ್ರಿ, ಹಝ್ರತ್ ಶೈಖ್ ಝುಬೈರ್ ಷಾ ಚಿಶ್ತಿ ಉಲ್ ಖಾದ್ರಿ, ಹಝ್ರತ್ ಸಯ್ಯದ್ ನವೀಸ್ ಷಾ ಖಾದ್ರಿ, ಹಝ್ರತ್ ನಸ್ರುಲ್ಲಾ ಷಾ ಖಾದ್ರಿ, ಹಝ್ರತ್ ಮಹಬೂಬ್ ಶಾ ಚಿಶ್ತಿ, ಹಝ್ರತ್ ಮುನವ್ವರ್ ವಲಿಯುಲ್ಲಾ ಷಾ ಜುನೈದಿ, ಮುಫ್ತಿ ಮುಶ್ತಾಕ್ ಅಹ್ಮದ್ ಮಕ್ಬೂಲಿ ಸಹಿತ ಸೂಫಿ ಸಂತರು, ಉಲಮಾಗಳು, ಶರಣ ಸಂತರು, ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮೈಸೂರು : ಜನವರಿ 18 ರಂದು ಅಜ್ಮೀರ್ ಖ್ವಾಜಾ ಅನುಸ್ಮರಣೆ ‘ಖ್ವಾಜಾ ಕೀ ಛಟ್ಟಿ Rating: 5 Reviewed By: karavali Times
Scroll to Top