ಅಕಾಲಿಕ ಮರಣ ಹೊಂದಿದ ಅಝೀಝ್ ಬೊಳ್ಳಾಯಿ ಮನೆಗೆ ಸ್ಪೀಕರ್ ಭೇಟಿ - Karavali Times ಅಕಾಲಿಕ ಮರಣ ಹೊಂದಿದ ಅಝೀಝ್ ಬೊಳ್ಳಾಯಿ ಮನೆಗೆ ಸ್ಪೀಕರ್ ಭೇಟಿ - Karavali Times

728x90

20 January 2024

ಅಕಾಲಿಕ ಮರಣ ಹೊಂದಿದ ಅಝೀಝ್ ಬೊಳ್ಳಾಯಿ ಮನೆಗೆ ಸ್ಪೀಕರ್ ಭೇಟಿ

ಬಂಟ್ವಾಳ, ಜನವರಿ 20, 2024 (ಕರಾವಳಿ ಟೈಮ್ಸ್) : ಜನವರಿ 18 ರಂದು ಗುರುವಾರ ಅಕಾಲಿಕ ಮರಣ ಹೊಂದಿದ ಸಜಿಪಮೂಡ ಗ್ರಾಮ ಪಂಚಾಯತ್ ಸದಸ್ಯರೂ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಹಾಜಿ ಬಿಐಬಿ ಅಬ್ದುಲ್ ಅಝೀಝ್ ಬೊಳ್ಳಾಯಿ ಅವರ ಮನೆಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಅವರು ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 

ಈ ಸಂದರ್ಭ ಮುಡಿಪು ಬ್ಲಾಕ್ ಕಾಂಗ್ರೆಸ್ ವಕ್ತಾರ, ಇರಾ ಗ್ರಾ ಪಂ ಸದಸ್ಯ ಅಬ್ದುಲ್ ರಝಾಕ್ ಕುಕ್ಕಾಜೆ, ಸಜಿಪಮೂಡ ಗ್ರಾ ಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜಾ, ಮಾಜಿ ಉಪಾಧ್ಯಕ್ಷ ಸಿದ್ದೀಕ್ ಕೊಳಕೆ, ಬೊಳ್ಳಾಯಿ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಕಾರ್ಯದರ್ಶಿ ಅಬ್ದುಲ್ ರಝಾಕ್ ಬೊಳ್ಳಾಯಿ, ಇರಾ ವಲಯ ಕಾಂಗ್ರೆಸ್ ಅಧ್ಯಕ್ಷ ಅಶ್ರಫ್ ಸಂಪಿಲ ಮೊದಲಾದವರು ಜೊತೆಗಿದ್ದರು.  

  • Blogger Comments
  • Facebook Comments

0 comments:

Post a Comment

Item Reviewed: ಅಕಾಲಿಕ ಮರಣ ಹೊಂದಿದ ಅಝೀಝ್ ಬೊಳ್ಳಾಯಿ ಮನೆಗೆ ಸ್ಪೀಕರ್ ಭೇಟಿ Rating: 5 Reviewed By: karavali Times
Scroll to Top