ಅಕ್ರಮ ಮರಳು ಸಾಗಾಟ ಬೇಧಿಸಿ ಚಾಲಕ ಸಹಿತ ಮರಳನ್ನು ವಶಪಡಿಸಿಕೊಂಡ ಸುಳ್ಯ ಪೊಲೀಸರು - Karavali Times ಅಕ್ರಮ ಮರಳು ಸಾಗಾಟ ಬೇಧಿಸಿ ಚಾಲಕ ಸಹಿತ ಮರಳನ್ನು ವಶಪಡಿಸಿಕೊಂಡ ಸುಳ್ಯ ಪೊಲೀಸರು - Karavali Times

728x90

1 January 2024

ಅಕ್ರಮ ಮರಳು ಸಾಗಾಟ ಬೇಧಿಸಿ ಚಾಲಕ ಸಹಿತ ಮರಳನ್ನು ವಶಪಡಿಸಿಕೊಂಡ ಸುಳ್ಯ ಪೊಲೀಸರು

ಸುಳ್ಯ, ಜನವರಿ 02, 2024 (ಕರಾವಳಿ ಟೈಮ್ಸ್) : ಟಿಪ್ಪರ್ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ಪ್ರಕರಣ ಪತ್ತೆ ಹಚ್ಚಿದ ಸುಳ್ಯ ಪೊಲೀಸರು ಲಾರಿ, ಮರಳು ಸಹಿತ ಆರೋಪಿ ಚಾಲಕನನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ರಾತ್ರಿ ಜಾಲ್ಸೂರು ಗ್ರಾಮ ಅಡ್ಕಾರ್ ಎಂಬಲ್ಲಿ ನಡೆದಿದೆ. 

ಸುಳ್ಯ ಠಾಣಾ ಎಸ್ಸೈ ಸರಸ್ವತಿ ಬಿ ಟಿ ಅವರ ನೇತೃತ್ವದ ಪೊಲೀಸರು ಜಾಲ್ಸೂರು ಗ್ರಾಮದ ಅಡ್ಕಾರ್ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದ್ವಾರದ ಈ ಕಾರ್ಯಾಚರಣೆ ನಡೆಸಿದ್ದು, ಮರಳು ಸಾಗಾಟ ಮಾಡುತ್ತಿದ್ದ ಲಾರಿ ಚಾಲಕ ಸುಳ್ಯ ಕಸಬ ಗ್ರಾಮದ ನಿವಾಸಿ ಮಹಮ್ಮದ್ ಬಶೀರ್ (36) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ಚಾಲಕನನ್ನು ವಿಚಾರಣೆ ನಡೆಸಿದ ವೇಳೆ ಮಂಡೆಕೋಲು ಪಯಸ್ವಿನಿ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಕಳ್ಳತನ ಮಾಡಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. 

ಆರೋಪಿ ಸಹಿತ 2 ಲಕ್ಷ ರೂಪಾಯಿ ಮೌಲ್ಯದ ಲಾರಿ, 5 ಸಾವಿರ ರೂಪಾಯಿ ಮೌಲ್ಯದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಸುಳ್ಯ ಪೆÇಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2024 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಮರಳು ಸಾಗಾಟ ಬೇಧಿಸಿ ಚಾಲಕ ಸಹಿತ ಮರಳನ್ನು ವಶಪಡಿಸಿಕೊಂಡ ಸುಳ್ಯ ಪೊಲೀಸರು Rating: 5 Reviewed By: karavali Times
Scroll to Top