ನರಿಕೊಂಬು : ತಂದೆ ಮನೆಗೆ ಬಂದು ವಾಪಾಸು ಹೋಗುತ್ತಿದ್ದ ವ್ಯಕ್ತಿ ಮೇಲೆ ತಂಡದಿಂದ ದಾಳಿ - Karavali Times ನರಿಕೊಂಬು : ತಂದೆ ಮನೆಗೆ ಬಂದು ವಾಪಾಸು ಹೋಗುತ್ತಿದ್ದ ವ್ಯಕ್ತಿ ಮೇಲೆ ತಂಡದಿಂದ ದಾಳಿ - Karavali Times

728x90

16 February 2024

ನರಿಕೊಂಬು : ತಂದೆ ಮನೆಗೆ ಬಂದು ವಾಪಾಸು ಹೋಗುತ್ತಿದ್ದ ವ್ಯಕ್ತಿ ಮೇಲೆ ತಂಡದಿಂದ ದಾಳಿ

 ಬಂಟ್ವಾಳ, ಫೆಬ್ರವರಿ 17, 2024 (ಕರಾವಳಿ ಟೈಮ್ಸ್) : ತಂದೆಗೆ ಮನೆಗೆ ಬಂದು ವಾಪಸು ಕಾರಿನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಕಾರು ಹಾಗೂ ಬೈಕುಗಳಲ್ಲಿ ಬಂದ ತಂಡವೊಂದು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಘಟನೆ ನರಿಕೊಂಬು ಗ್ರಾಮದ ಪೈತಾಜೆ ಎಂಬಲ್ಲಿ ಫೆ 12 ರಂದು ಸಂಜೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಲ್ಲೆಗೊಳಗಾದ ವ್ಯಕ್ತಿಯನ್ನು ನರಿಕೊಂಬು ಗ್ರಾಮದ ನಿವಾಸಿ ಎಲ್ ಜೀವನ (45) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ನರಿಕೊಂಬು ಗ್ರಾಮದ ಮೊಗರ್ನಾಡು ನಿವಾಸಿ ಶರತ್, ಪೈತಾಜೆ ನಿವಾಸಿಗಳಾದ ಮ್ಯಾಕ್ಸಿಂ, ರೋಹಿತ್ ಪೂಜಾರಿ, ಉಮೇಶ್ ಭಂಡಾರಿ, ಚೇತು ಪೂಜಾರಿ, ಸಿನಿತ್ ಡಿ’ಸೋಜ, ತಾಲಿಪಡ್ಪು ನಿವಾಸಿ ಅಭಿ, ಕೇದಿಗೆ ನಿವಾಸಿ ಯಶೋಧರ, ರಮೇಶ ಸಪಲ್ಯ ಎಂದು ಗುರುತಿಸಲಾಗಿದೆ. 

ಈ ಬಗ್ಗೆ ಹಲ್ಲೆಗೊಳಗಾದ ಎಲ್ ಜೀವನ ಅವರು ಪೊಲೀಸರಿಗೆ ದೂರು ನೀಡಿದ್ದು, ಫೆಬ್ರವರಿ 12 ರಂದು ತಂದೆಯ ಮನೆಯಾದ ನರಿಕೊಂಬು ಗ್ರಾಮದ ಪೈತಾಜೆಯಿಂದ ಮಂಗಳೂರಿನ ಮನೆಗೆ ಕಾರಿನಲ್ಲಿ ಹೋಗುತ್ತಾ ತಂದೆಯ ಮನೆಯಿಂದ ಸ್ವಲ್ಪದೂರ ತಲುಪಿದಾಗ, ಆರೋಪಿಗಳು 2 ಕಾರು ಹಾಗೂ ಬೈಕಿನಲ್ಲಿ ಬಂದು, ಜೀವನ್ ಅವರ ಕಾರಿಗೆ ಅಡ್ಡಕಟ್ಟಿ ಕತ್ತಿ ಹಾಗೂ ದೊಣ್ಣೆಗಳನ್ನು ಹಿಡಿದು, ಅವ್ಯಾಚವಾಗಿ ಬೈದು, ಕಾರಿಗೆ ಹಾನಿ ಮಾಡಿರುತ್ತಾರೆ. ಆರೋಪಿ ಶರತ್ ಎಂಬಾತ ಜೀವನಗೆ ಹಲ್ಲೆ ನಡೆಸಿ, ಕಾರನ್ನು ಚರಂಡಿಗೆ ದೂಡಿ ಹಾಕಿರುತ್ತಾನೆ. ಮತ್ತೋರ್ವ ಆರೋಪಿತೆ ಸಿನಿತ್ ಡಿಸೋಜ ಕತ್ತಿಯಿಂದ ಕಡಿಯಲು ಪ್ರಯತ್ನಿಸಿ ಜೀವಬೆದರಿಕೆ ಹಾಕಿರುತ್ತಾರೆ. 

ಆರೋಪಿಗಳ ಹಲ್ಲೆಯಿಂದ ಗಾಯಗೊಂಡ ಜೀವನ ಅವರು ಮಂಗಳೂರಿನ ವೆನ್ಲಾಕ್ ಆಸ್ವತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 47/2024 ಕಲಂ 341, 324, 427, 504, 506, 143, 147 ಜೊತೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನರಿಕೊಂಬು : ತಂದೆ ಮನೆಗೆ ಬಂದು ವಾಪಾಸು ಹೋಗುತ್ತಿದ್ದ ವ್ಯಕ್ತಿ ಮೇಲೆ ತಂಡದಿಂದ ದಾಳಿ Rating: 5 Reviewed By: karavali Times
Scroll to Top