ಬಾಂಬಿಲ : ಕೆ.ಎಸ್.ಆರ್.ಟಿ.ಸಿ. ಬಸ್ಸು ಡಿಕ್ಕಿ ಹೊಡೆದು ಕಾರು ಚಾಲಕಗೆ ಗಾಯ - Karavali Times ಬಾಂಬಿಲ : ಕೆ.ಎಸ್.ಆರ್.ಟಿ.ಸಿ. ಬಸ್ಸು ಡಿಕ್ಕಿ ಹೊಡೆದು ಕಾರು ಚಾಲಕಗೆ ಗಾಯ - Karavali Times

728x90

18 March 2024

ಬಾಂಬಿಲ : ಕೆ.ಎಸ್.ಆರ್.ಟಿ.ಸಿ. ಬಸ್ಸು ಡಿಕ್ಕಿ ಹೊಡೆದು ಕಾರು ಚಾಲಕಗೆ ಗಾಯ

ಬಂಟ್ವಾಳ, ಮಾರ್ಚ್ 18, 2024 (ಕರಾವಳಿ ಟೈಮ್ಸ್) : ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ಭಾನುವಾರ ಸಂಭವಿಸಿದೆ. 

ಗಾಯಾಳು ಕಾರು ಚಾಲಕನನ್ನು ಕಾವಳಪಡೂರು ಗ್ರಾಮದ ನಿವಾಸಿ ಸಿರಿಲ್ ಡಿ’ಸೋಜ (60) ಎಂದು ಗುರುತಿಸಲಾಗಿದೆ. ಇವರು ತನ್ನ ಕಾರಿನಲ್ಲಿ ಮದ್ವ ಕಡೆಯಿಂದ ವಗ್ಗ ಕಡೆಗೆ ಕಡೂರು-ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಬಾಂಬಿಲ ಎಂಬಲ್ಲಿ ಬಸವರಾಜ್ ಎಂಬವರು ಚಲಾಯಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ಎದುರಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಗಾಯಗೊಂಡ ಕಾರು ಚಾಲಕನನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಾಂಬಿಲ : ಕೆ.ಎಸ್.ಆರ್.ಟಿ.ಸಿ. ಬಸ್ಸು ಡಿಕ್ಕಿ ಹೊಡೆದು ಕಾರು ಚಾಲಕಗೆ ಗಾಯ Rating: 5 Reviewed By: karavali Times
Scroll to Top