ಬೆಳ್ತಂಗಡಿ : ಅಂಬ್ಯುಲೆನ್ಸ್ ವಾಹನವನ್ನು ತಡೆದು ಚಾಲಕಗೆ ಹಲ್ಲೆ ನಡೆಸಿದ ಕಾರು ಚಾಲಕ - Karavali Times ಬೆಳ್ತಂಗಡಿ : ಅಂಬ್ಯುಲೆನ್ಸ್ ವಾಹನವನ್ನು ತಡೆದು ಚಾಲಕಗೆ ಹಲ್ಲೆ ನಡೆಸಿದ ಕಾರು ಚಾಲಕ - Karavali Times

728x90

12 March 2024

ಬೆಳ್ತಂಗಡಿ : ಅಂಬ್ಯುಲೆನ್ಸ್ ವಾಹನವನ್ನು ತಡೆದು ಚಾಲಕಗೆ ಹಲ್ಲೆ ನಡೆಸಿದ ಕಾರು ಚಾಲಕ

ಬೆಳ್ತಂಗಡಿ, ಮಾರ್ಚ್ 12, 2024 (ಕರಾವಳಿ ಟೈಮ್ಸ್) : ಅಂಬ್ಯುಲೆನ್ಸ್ ವಾಹನಕ್ಕೆ ಕಾರು ಅಡ್ಡ ನಿಲ್ಲಿಸಿ ಅಂಬ್ಯುಲೆನ್ಸ್ ಚಾಲಕಗೆ ಹಲ್ಲೆ ನಡೆಸಿದ ಘಟನೆ ಲಾಯಿಲ ಜಂಕ್ಷನ್ನಿನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. 

ಗಾಯಗೊಂಡ ಅಂಬ್ಯುಲೆನ್ಸ್ ಚಾಲಕನನ್ನು ಕಡಬ ತಾಲೂಕು, ಸುಬ್ರಹ್ಮಣ್ಯ ಗ್ರಾಮದ ವಿದ್ಯಾನಗರ ನಿವಾಸಿ ರಕ್ಷಿತ್ ಕುಮಾರ್ (27) ಎಂದು ಹೆಸರಿಸಲಾಗಿದೆ. ರಕ್ಷಿತ್ ಅವರು ಅಂಬ್ಯುಲೆನ್ಸ್ ವಾಹನದಲ್ಲಿ ಬೆಳ್ತಂಗಡಿಯಿಂದ ಉಜಿರೆ ಕಡೆ ಹೋಗುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬಂದ ಕೆಎ-51 ಎಂಡಿ 4631 ನೋಂದಣಿ ಸಂಖ್ಯೆಯ ಕಾರನ್ನು ಆದರ ಚಾಲಕ ಅಂಬ್ಯೂಲೆನ್ಸ್ ವಾಹನಕ್ಕೆ ಅಡ್ಡ ನಿಲ್ಲಿಸಿ, ಕಾರಿನ ಚಾಲಕ ಮತ್ತು ಓರ್ವ ಮಹಿಳೆ ಕಾರಿನಿಂದ ಇಳಿದು ಬಂದು ರಕ್ಷಿತ್ ಅವರಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ  ಬೈದು, ಅಂಬ್ಯುಲೆನ್ಸ್ ವಾಹನಕ್ಕೆ ಸುಮಾರು 3 ಸಾವಿರ ರೂಪಾಯಿಯಷ್ಟು ಹಾನಿ ಮಾಡಿರುತ್ತಾರೆ. ಹಲ್ಲೆಯಿಂದ ಗಾಯಗೊಂಡ  ರಕ್ಷಿತ್ ಕುಮಾರ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2024 ಕಲಂ 504, 341, 323, 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಅಂಬ್ಯುಲೆನ್ಸ್ ವಾಹನವನ್ನು ತಡೆದು ಚಾಲಕಗೆ ಹಲ್ಲೆ ನಡೆಸಿದ ಕಾರು ಚಾಲಕ Rating: 5 Reviewed By: karavali Times
Scroll to Top