ಬೆಂಜನಪದವು : ಬೈಕುಗಳ ನಡುವೆ ಅಪಘಾತದಿಂದ ಮೂವರು ಆಸ್ಪತ್ರೆಗೆ - Karavali Times ಬೆಂಜನಪದವು : ಬೈಕುಗಳ ನಡುವೆ ಅಪಘಾತದಿಂದ ಮೂವರು ಆಸ್ಪತ್ರೆಗೆ - Karavali Times

728x90

28 March 2024

ಬೆಂಜನಪದವು : ಬೈಕುಗಳ ನಡುವೆ ಅಪಘಾತದಿಂದ ಮೂವರು ಆಸ್ಪತ್ರೆಗೆ

ಬಂಟ್ವಾಳ, ಮಾರ್ಚ್ 28, 2024 (ಕರಾವಳಿ ಟೈಮ್ಸ್) : ಬೈಕುಗಳ ನಡುವೆ ಅಪಘಾತ ಸಂಭವಿಸಿ ಮೂವರು ಗಾಯಗೊಂಡಯ ಆಸ್ಪತ್ರೆಗೆ ದಾಖಲಾದ ಘಟನೆ ಅಮ್ಮುಂಜೆ ಗ್ರಾಮದ ಬೆಂಜನಪದವು ಎಂಬಲ್ಲಿ ಮಾ 26 ರಂದು ಸಂಜೆ ಸಂಭವಿಸಿದೆ. 

ಗಾಯಗೊಂಡವರನ್ನು ಬೈಕ್ ಸವಾರ ಅಮ್ಮುಂಜೆ ನಿವಾಸಿ ಮುಹಮ್ಮದ್ ಇಕ್ಬಾಲ್, ಇನ್ನೊಂದು ಬೈಕ್ ಸವಾರರಾದ ಜಗದೀಶ್ ಹಾಗೂ ರೂಪಕ್ ಎಂದು ಹೆಸರಿಸಲಾಗಿದೆ. 

ಇಕ್ಬಾಲ್ ಅವರು ತನ್ನ ಬೈಕಿನಲ್ಲಿ ನೀರುಮಾರ್ಗ-ಫರಂಗಿಪೇಟೆ ಸಂಪರ್ಕದ ರಸ್ತೆಯಲ್ಲಿ  ಸಂಚರಿಸುತ್ತಿದ್ದ ವೇಳೆ ಬೆಂಜನಪದವು ಜಗದೀಶ್ ಸವಾರಿ ಮಾಡಿಕೊಂಡು ಬಂದ ಬೈಕ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಎರಡೂ ಬೈಕ್ ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. 

ಗಾಯಾಳು ಇಕ್ಬಾಲ್ ಅವರಿಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇನ್ನೊಂದು ಬೈಕ್ ಸವಾರ ಜಗದೀಶ್ ಕೂಡಾ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾದರೆ, ಸಹಸವಾರ ರೂಪಕ್ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಈ ಬಗ್ಗೆ ಗಾಯಾಳು ಇಕ್ಬಾಲ್ ಅವರ ತಂದೆ ಅಬ್ದುಲ್ ಸತ್ತಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಂಜನಪದವು : ಬೈಕುಗಳ ನಡುವೆ ಅಪಘಾತದಿಂದ ಮೂವರು ಆಸ್ಪತ್ರೆಗೆ Rating: 5 Reviewed By: karavali Times
Scroll to Top