ಪುತ್ತೂರು : ಮನೆಗೆ ನುಗ್ಗಿ ವ್ಯಕ್ತಿಗೆ 15 ಮಂದಿಯ ತಂಡದಿಂದ ಬೆದರಿಕೆ, ಪ್ರಕರಣ ದಾಖಲು - Karavali Times ಪುತ್ತೂರು : ಮನೆಗೆ ನುಗ್ಗಿ ವ್ಯಕ್ತಿಗೆ 15 ಮಂದಿಯ ತಂಡದಿಂದ ಬೆದರಿಕೆ, ಪ್ರಕರಣ ದಾಖಲು - Karavali Times

728x90

18 March 2024

ಪುತ್ತೂರು : ಮನೆಗೆ ನುಗ್ಗಿ ವ್ಯಕ್ತಿಗೆ 15 ಮಂದಿಯ ತಂಡದಿಂದ ಬೆದರಿಕೆ, ಪ್ರಕರಣ ದಾಖಲು

ಪುತ್ತೂರು, ಮಾರ್ಚ್ 18, 2024 (ಕರಾವಳಿ ಟೈಮ್ಸ್) : ಮನೆಯಲ್ಲಿದ್ದ ವ್ಯಕ್ತಿಗೆ ಸುಮಾರು 15 ಮಂದಿಯ ತಂಡ ಅಕ್ರಮವಾಗಿ ಮನೆಗೆ ಪ್ರವೇಶ ಮಾಡಿ ಬೈದು ಜೀವಬೆದರಿಕೆ ಒಡ್ಡಿದ ಘಟನೆ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. 

ಇಲ್ಲಿನ ನಿವಾಸಿ ಜಯಾನಂದ ಕೆ (41) ಎಂಬವರು ಭಾನುವಾರ ಸಂಜೆ ತನ್ನ ಮನೆಯಲ್ಲಿದ್ದ ವೇಳೆ ಏಕಾಏಕಿಯಾಗಿ ಆರೋಪಿಗಳಾದ ಪ್ರಜ್ವಲ್ ರೈ, ಸನತ್ ರೈ ಮತ್ತು ಇತರ ಸುಮಾರು 15 ಜನರು ಮನೆಯೊಳಗೆ ಅಕ್ರಮ ಪ್ರವೇಶಮಾಡಿ ಜಯಾನಂದ ಹಾಗೂ ಅವರ ಮನೆ ಮಂದಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪುತ್ತೂರು ನಗರ  ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2023 ಕಲಂ 448, 143, 147, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ಮನೆಗೆ ನುಗ್ಗಿ ವ್ಯಕ್ತಿಗೆ 15 ಮಂದಿಯ ತಂಡದಿಂದ ಬೆದರಿಕೆ, ಪ್ರಕರಣ ದಾಖಲು Rating: 5 Reviewed By: karavali Times
Scroll to Top