ಸಣ್ಣ ಮಗು ಮಲಗಿದೆ, ಜೋರಾಗಿ ಮಾತನಾಡಬೇಡ ಎಂದಿದ್ದಕ್ಕೆ ಕತ್ತಿಯಿಂದ ಹಲ್ಲೆ ನಡೆಸಿದ ಕಿರಾತಕ - Karavali Times ಸಣ್ಣ ಮಗು ಮಲಗಿದೆ, ಜೋರಾಗಿ ಮಾತನಾಡಬೇಡ ಎಂದಿದ್ದಕ್ಕೆ ಕತ್ತಿಯಿಂದ ಹಲ್ಲೆ ನಡೆಸಿದ ಕಿರಾತಕ - Karavali Times

728x90

27 March 2024

ಸಣ್ಣ ಮಗು ಮಲಗಿದೆ, ಜೋರಾಗಿ ಮಾತನಾಡಬೇಡ ಎಂದಿದ್ದಕ್ಕೆ ಕತ್ತಿಯಿಂದ ಹಲ್ಲೆ ನಡೆಸಿದ ಕಿರಾತಕ

ಕಡಬ, ಮಾರ್ಚ್ 27, 2024 (ಕರಾವಳಿ ಟೈಮ್ಸ್) : ಸಣ್ಣ ಮಗು ಮಲಗಿದೆ. ಜೋರಾಗಿ ಮಾತನಾಡಬೇಡ ಎಂದಿದ್ದಕ್ಕೆ ಸಂಬಂಧಿಕನೇ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ಬಲ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದೆ. 

ಇಲ್ಲಿನ ನಿವಾಸಿ ರಮೇಶ್ ಕೆ (37) ಎಂಬವರೇ ಹಲ್ಲೆಗೊಳಗಾದವರು. ಆರೋಪಿಯನ್ನು ಸಂಬಂಧಿಯೇ ಆಗಿರುವ ಸುಂದರ ಹೊಸ್ಮಠ ಎಂದು ಗುರುತಿಸಲಾಗಿದೆ. ರಮೇಶ ಅವರು ತನ್ನ ಹೆಂಡತಿ ಹಾಗೂ ಸಣ್ಣ ಮಗುವಿನೊಂದಿಗೆ ಮನೆಯಲ್ಲಿರುವ ವೇಳೆ ಮನೆಗೆ ಬಂದ ಆರೋಪಿ ಸುಂದರ ಹೊಸ್ಮಠ ಅವರು ಜೋರಾಗಿ ಮಾತನಾಡಲು ಆರಂಭಿಸಿದ್ದು, ಈ ಸಂದರ್ಭ ರಮೇಶ ಅವರು ಸಣ್ಣ ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದ್ದಕ್ಕೆ ಕುಪಿತನಾದ ಆರೋಪಿ ಸುಂದರ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. 

ಹಲ್ಲೆಯಿಂದ ಗಾಯಗೊಂಡ ರಮೇಶ ಅವರು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22 /2024 ಕಲಂ 324 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸಣ್ಣ ಮಗು ಮಲಗಿದೆ, ಜೋರಾಗಿ ಮಾತನಾಡಬೇಡ ಎಂದಿದ್ದಕ್ಕೆ ಕತ್ತಿಯಿಂದ ಹಲ್ಲೆ ನಡೆಸಿದ ಕಿರಾತಕ Rating: 5 Reviewed By: karavali Times
Scroll to Top