ಕೋಟೆಕಣಿ : ಚಾಲಕನ ನಿಯಂತ್ರಣ ಮೀರಿದ ಕಾರು ಗುಂಡಿಗೆ ಬಿದ್ದು ನಾಲ್ವರಿಗೆ ಗಾಯ - Karavali Times ಕೋಟೆಕಣಿ : ಚಾಲಕನ ನಿಯಂತ್ರಣ ಮೀರಿದ ಕಾರು ಗುಂಡಿಗೆ ಬಿದ್ದು ನಾಲ್ವರಿಗೆ ಗಾಯ - Karavali Times

728x90

3 March 2024

ಕೋಟೆಕಣಿ : ಚಾಲಕನ ನಿಯಂತ್ರಣ ಮೀರಿದ ಕಾರು ಗುಂಡಿಗೆ ಬಿದ್ದು ನಾಲ್ವರಿಗೆ ಗಾಯ

ಬಂಟ್ವಾಳ, ಮಾರ್ಚ್ 03, 2024 (ಕರಾವಳಿ ಟೈಮ್ಸ್) : ಚಾಲಕನ ನಿಯಂತ್ರಣ ಮೀರಿದ ಕಾರು ರಸ್ತೆ ಬದಿ ಗುಂಡಿಗೆ ಬಿದ್ದು ಚಾಲಕ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಸಜಿಪನಡು ಗ್ರಾಮದ ಕೋಟೆಕಣಿ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. 

ಗಾಯಾಳುಗಳನ್ನು ಬಂದಾರು ನಿವಾಸಿಗಳಾದ ಕಾರು ಚಾಲಕ ಹಮೀದ್, ಅವರ ಪುತ್ರ ಮೊಹಮ್ಮದ್ ಹನೀಫ್ (19), ತಾಯಿ ಜಮೀಳಾ, ಸಹೋದರ ಮೊಹಮ್ಮದ್ ಅನೀಝ್, ಅಕ್ಕನ ಮಗ ಮೊಹಮ್ಮದ್ ಝಯಾನ್ ಎಂದು ಹೆಸರಿಸಲಾಗಿದೆ. 

ಈ ಬಗ್ಗೆ ಮೊಹಮ್ಮದ್ ಹನೀಫ್ ಅವರು ಪೊಲೀಸರಿಗೆ ದೂರು ನೀಡಿದ್ದು, ಹನೀಫ್ ಅವರು ತಾಯಿ ಜಮೀಳಾ, ಅಣ್ಣ ಮೊಹಮ್ಮದ್ ಅನೀಝ್, ಅಕ್ಕ ಅಜ್ಮಿಯಾ ಹಾಗೂ ಅಕ್ಕನ ಮಗ ಮೊಹಮ್ಮದ್ ಝಯಾನ್ ಅವರ ಜೊತೆ ತಂದೆಯಾದ ಹಮೀದ್ ಅವರು ಚಾಲಕರಾಗಿದ್ದ ಕಾರಿನಲ್ಲಿ ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯಲ್ಲಿ ಮೂಲಕ ಸಂಚರಿಸುತ್ತಿದ್ದ ವೇಳೆ ಸಜಿಪನಡು ಗ್ರಾಮದ ಕೋಟೆಕಣಿ ಎಂಬಲ್ಲಿ ತಲುಪಿದಾಗ, ಚಾಲಕ ಹಮೀದ್ ಅವರ ನಿಯಂತ್ರಣ ಮೀರಿದ ಕಾರು ರಸ್ತೆ ಬದಿ ಗುಂಡಿಗೆ ಬಿದ್ದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಗಾಯಗೊಂಡವರನ್ನು ಮಂಗಳೂರು ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೋಟೆಕಣಿ : ಚಾಲಕನ ನಿಯಂತ್ರಣ ಮೀರಿದ ಕಾರು ಗುಂಡಿಗೆ ಬಿದ್ದು ನಾಲ್ವರಿಗೆ ಗಾಯ Rating: 5 Reviewed By: karavali Times
Scroll to Top