ಕುವೆಟ್ಟು : ಅಕ್ರಮ ಜಾನುವಾರು ವಧಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರ ದಾಳಿ, ದನದ ಮಾಂಸ ವಶಕ್ಕೆ - Karavali Times ಕುವೆಟ್ಟು : ಅಕ್ರಮ ಜಾನುವಾರು ವಧಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರ ದಾಳಿ, ದನದ ಮಾಂಸ ವಶಕ್ಕೆ - Karavali Times

728x90

8 April 2024

ಕುವೆಟ್ಟು : ಅಕ್ರಮ ಜಾನುವಾರು ವಧಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರ ದಾಳಿ, ದನದ ಮಾಂಸ ವಶಕ್ಕೆ

ಬೆಳ್ತಂಗಡಿ, ಎಪ್ರಿಲ್ 08, 2024 (ಕರಾವಳಿ ಟೈಮ್ಸ್) : ಅಕ್ರಮ ಜಾನುವಾರು ವಧಾ ಸ್ಥಳಕ್ಕೆ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ದನದ ಮಾಂಸ, ವಧೆ ಮಾಡಿದ್ದ 6 ಜಾನುವಾರುಗಳನ್ನು ವಶಕ್ಕೆ ಪಡೆದಿಕೊಂಡು ಇಬ್ಬರು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡ ಘಟನೆ ಕುವೆಟ್ಟು ಗ್ರಾಮದ ಅರಮಲೆ ಬೆಟ್ಟ ಎಂಬಲ್ಲಿ ಭಾನುವಾರ ನಡೆದಿದೆ.

ಆರೋಪಿಗಳನ್ನು ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ನಿವಾಸಿ ಅಬ್ದುಲ್ ರಹಿಮಾನ್ (35) ಹಾಗೂ ಇಕ್ಬಾಲ್ (42) ಎಂದು ಹೆಸರಿಸಲಾಗಿದೆ. ಇಲ್ಲಿನ ನಿವಾಸಿ ಬದ್ರುದ್ದೀನ್ ಎಂಬಾತನ ಮನೆಯ ಹಿಂಬದಿಯಲ್ಲಿ, ಅಕ್ರಮವಾಗಿ ಜಾನುವಾರ ವಧಾ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್ಸೈ ಮುರಳೀಧರ್ ಕೆ ಜಿ ನೇತತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. 

ದಾಳಿ ವೇಳೆ ಸ್ಥಳದಲ್ಲಿ ಮಾರಾಟ ಮಾಡುವರೇ ಶೇಖರಿಸಿಟ್ಟ ಸುಮಾರು 87 ಕೆ ಜಿ ದನದ ಮಾಂಸ,  ಮಾಂಸಕ್ಕಾಗಿ ವಧೆ ಮಾಡಲಾಗಿದ್ದ 6 ಜಾನುವಾರುಗಳನ್ನು ಹಾಗೂ ಮಾಂಸ ಮಾಡಲು ಉಪಯೋಗಿಸಿದ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕುವೆಟ್ಟು : ಅಕ್ರಮ ಜಾನುವಾರು ವಧಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರ ದಾಳಿ, ದನದ ಮಾಂಸ ವಶಕ್ಕೆ Rating: 5 Reviewed By: karavali Times
Scroll to Top