ಫರಂಗಿಪೇಟೆ : ಆತ್ಮಹತ್ಯೆಯಿಂದ ರಕ್ಷಿಸಲು ಬಂದ ತಂದೆ-ಪುತ್ರಿಯನ್ನು ದೂಡಿ ಹಾಕಿ ನದಿಗೆ ಹಾರಿ ಜೀವ ಬಿಟ್ಟ ಮಹಿಳೆ - Karavali Times ಫರಂಗಿಪೇಟೆ : ಆತ್ಮಹತ್ಯೆಯಿಂದ ರಕ್ಷಿಸಲು ಬಂದ ತಂದೆ-ಪುತ್ರಿಯನ್ನು ದೂಡಿ ಹಾಕಿ ನದಿಗೆ ಹಾರಿ ಜೀವ ಬಿಟ್ಟ ಮಹಿಳೆ - Karavali Times

728x90

17 April 2024

ಫರಂಗಿಪೇಟೆ : ಆತ್ಮಹತ್ಯೆಯಿಂದ ರಕ್ಷಿಸಲು ಬಂದ ತಂದೆ-ಪುತ್ರಿಯನ್ನು ದೂಡಿ ಹಾಕಿ ನದಿಗೆ ಹಾರಿ ಜೀವ ಬಿಟ್ಟ ಮಹಿಳೆ

ಬಂಟ್ವಾಳ, ಎಪ್ರಿಲ್ 17, 2024 (ಕರಾವಳಿ ಟೈಮ್ಸ್) : ತಂದೆ ಹಾಗೂ ಪುತ್ರಿಯ ಎದುರೇ ಮಹಿಳೆಯೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.

ಪುದು ಗ್ರಾಮದ ಕುಮ್ಡೇಲು ನಿವಾಸಿ ಉಮೇಶ್ ಬೆಳ್ಚಡ ಎಂಬವರ ಪತ್ನಿ ಯಶೋದಾ (38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈ ಬಗ್ಗೆ ಮೃತರ ಪುತ್ರಿ ಸಂಪ್ರೀತಾ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಶೋದಾ ಯಶೋದಾ ಮೂರ್ಛೆ ರೋಗದಿಂದ ಬಳಲುತ್ತಿದ್ದರೆನ್ನಲಾಗಿದೆ. ಸೋಮವಾರ ರಾತ್ರಿ ತಾಯಿಯೊಂದಿಗೆ ಬಾಯಿ ಮಾತಿನ ಚಕಮಕಿ ನಡೆಸಿದ್ದು, ಬಳಿಕ ಯಶೋದಾ ಮಲಗಿದ್ದರು. ಮಂಗಳವಾರ ಬೆಳಗ್ಗೆದ್ದು ಎಂದಿನಂತೆ ಕೆಲಸಕ್ಕೆಂದು ಮನೆಯಿಂದ ತೆರಳಿದ್ದರು. ಆದರೆ ಬೆಳಿಗ್ಗೆ 9 ಗಂಟೆ ವೇಳೆ ಮನೆಗೆ ಕರೆ ಮಾಡಿ “ನಾನು ಫರಂಗಿಪೇಟೆಯಲ್ಲಿದ್ದೇನೆ. ನನಗೆ ಬದುಕುವುದು ಇಷ್ಟವಿಲ್ಲ. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿ ಫೆÇೀನ್ ಕಟ್ ಮಾಡಿದ್ದಾರೆನ್ನಲಾಗಿದೆ.

ತಕ್ಷಣ ಅವರ ಪುತ್ರಿ ಹಾಗೂ ಅವರ ತಂದೆ ಬಾಲಕೃಷ್ಣ ಅವರು ಜೊತೆಯಾಗಿ ಅಟೋ ರಿಕ್ಷಾದಲ್ಲಿ ಫರಂಗಿಪೇಟೆಗೆ ಬಂದಾಗ ಯಶೋದಾ ನೇತ್ರಾವತಿ ನದಿ ಕಿನಾರೆಗೆ ವೇಗವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಕಂಡಿದ್ದಾರೆ. ತಕ್ಷಣ ಯಶೋಧಾ ಬಳಿ ಓಡಿ ಹೋದ ಇವರು ನದಿ ಕಿನಾರೆ ಬಳಿ ಅವರನ್ನು ಹಿಡಿದಾಗ ಪುತ್ರಿ ಹಾಗೂ ತಂದೆಯನ್ನು ದೂಡಿ ಹಾಕಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ : ಆತ್ಮಹತ್ಯೆಯಿಂದ ರಕ್ಷಿಸಲು ಬಂದ ತಂದೆ-ಪುತ್ರಿಯನ್ನು ದೂಡಿ ಹಾಕಿ ನದಿಗೆ ಹಾರಿ ಜೀವ ಬಿಟ್ಟ ಮಹಿಳೆ Rating: 5 Reviewed By: karavali Times
Scroll to Top