ಇಂದು (ಎಪ್ರಿಲ್ 18) ಸಂಜೆ ಮೆಲ್ಕಾರ್ ಜಂಕ್ಷನ್, ನಂದಾವರ ಜಂಕ್ಷನ್ನಿನಲ್ಲಿ ರಮಾನಾಥ ರೈ ನೇತೃತ್ವದಲ್ಲಿ ಕೈ ಅಭ್ಯರ್ಥಿ ಮತಯಾಚನೆ, ಬಿ.ಸಿ.ರೋಡಿನಲ್ಲಿ ರೋಡ್ ಶೋ ಕಾರ್ಯಕ್ರಮ : ಯಶಸ್ಸಿಗೊಳಿಸಲು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಕರೆ - Karavali Times ಇಂದು (ಎಪ್ರಿಲ್ 18) ಸಂಜೆ ಮೆಲ್ಕಾರ್ ಜಂಕ್ಷನ್, ನಂದಾವರ ಜಂಕ್ಷನ್ನಿನಲ್ಲಿ ರಮಾನಾಥ ರೈ ನೇತೃತ್ವದಲ್ಲಿ ಕೈ ಅಭ್ಯರ್ಥಿ ಮತಯಾಚನೆ, ಬಿ.ಸಿ.ರೋಡಿನಲ್ಲಿ ರೋಡ್ ಶೋ ಕಾರ್ಯಕ್ರಮ : ಯಶಸ್ಸಿಗೊಳಿಸಲು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಕರೆ - Karavali Times

728x90

17 April 2024

ಇಂದು (ಎಪ್ರಿಲ್ 18) ಸಂಜೆ ಮೆಲ್ಕಾರ್ ಜಂಕ್ಷನ್, ನಂದಾವರ ಜಂಕ್ಷನ್ನಿನಲ್ಲಿ ರಮಾನಾಥ ರೈ ನೇತೃತ್ವದಲ್ಲಿ ಕೈ ಅಭ್ಯರ್ಥಿ ಮತಯಾಚನೆ, ಬಿ.ಸಿ.ರೋಡಿನಲ್ಲಿ ರೋಡ್ ಶೋ ಕಾರ್ಯಕ್ರಮ : ಯಶಸ್ಸಿಗೊಳಿಸಲು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಕರೆ

ಬಂಟ್ವಾಳ, ಎಪ್ರಿಲ್ 17, 2024 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರು ಇಂದು ಗುರುವಾರ (ಎಪ್ರಿಲ್ 18) ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ವ್ಯಾಪ್ತಿಯ ವಿವಿಧೆಡೆ ದಕ್ಷಿಣ ಕನ್ನಡ ಲೋಕಸಭಾ ಚುನಾವಣಾ ಪ್ರಚಾರ ಉಸ್ತುವಾರಿ, ಕೆಪಿಸಿಸಿ ಉಪಾಧ್ಯಕ್ಷರೂ ಮಾಜಿ ಸಚಿವರೂ ಆಗಿರುವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. 

ಸಮಾರೋಪ ಕಾರ್ಯಕ್ರಮವಾಗಿ ಸಂಜೆ 5 ಗಂಟೆಗೆ ಸಜಿಪಮುನ್ನೂರು-ನಂದಾವರ ಜಂಕ್ಷನ್, 5.30ಕ್ಕೆ ಪಾಣೆಮಂಗಳೂರು-ಮೆಲ್ಕಾರ್ ಜಂಕ್ಷನ್ನಿನಲ್ಲಿ ಚುನಾವಣಾ ಪ್ರಚಾರ, ಮತಯಾಚನೆ ಹಾಗೂ ಸಂಜೆ 6.30ಕ್ಕೆ ಬಿ ಸಿ ರೋಡು ಪೇಟೆಯಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಲಿದ್ದಾರೆ. 

ಈ ಎಲ್ಲಾ ಮತಯಾಚನೆ, ಪ್ರಚಾರ ಹಾಗೂ ರೋಡ್ ಶೋ ಕಾರ್ಯಕ್ರಮಗಳಿಗೆ ಕ್ಷೇತ್ರದ, ಬ್ಲಾಕಿನ ಹಾಗೂ ವಿಶೇಷವಾಗಿ ಪಾಣೆಮಂಗಳೂರು ವಲಯ ಮಟ್ಟದ ಕಾಂಗ್ರೆಸ್ ಪಕ್ಷದ ನಾಯಕರು, ಬೂತ್ ಮಟ್ಟದ ನಾಯಕರು, ಕಾರ್ಯಕರ್ತರು, ಸಾರ್ವಜನಿಕ ಮತದಾರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಹಾಗೂ ಈ ಬಾರಿ ಮಂಗಳೂರು ಕ್ಷೇತ್ರವನ್ನು ಬದಲಾವಣೆಯತ್ತ ಕೊಂಡೊಯ್ಯಲು ಸಹಕರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಶರೀಫ್ ಭೂಯಾ ಪ್ರಕಟಣೆಯಲ್ಲಿ ಕೋರಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಇಂದು (ಎಪ್ರಿಲ್ 18) ಸಂಜೆ ಮೆಲ್ಕಾರ್ ಜಂಕ್ಷನ್, ನಂದಾವರ ಜಂಕ್ಷನ್ನಿನಲ್ಲಿ ರಮಾನಾಥ ರೈ ನೇತೃತ್ವದಲ್ಲಿ ಕೈ ಅಭ್ಯರ್ಥಿ ಮತಯಾಚನೆ, ಬಿ.ಸಿ.ರೋಡಿನಲ್ಲಿ ರೋಡ್ ಶೋ ಕಾರ್ಯಕ್ರಮ : ಯಶಸ್ಸಿಗೊಳಿಸಲು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಕರೆ Rating: 5 Reviewed By: karavali Times
Scroll to Top