ಕರಾಯ : ಒಂಟಿ ಮಹಿಳೆಯಿದ್ದ ಮನೆಗೆ ಬಂದು ಚೂರಿ ತೋರಿಸಿ ಚಿನ್ನಾಭರಣ ದೋಚಿದ ಅಪರಿಚಿತರು - Karavali Times ಕರಾಯ : ಒಂಟಿ ಮಹಿಳೆಯಿದ್ದ ಮನೆಗೆ ಬಂದು ಚೂರಿ ತೋರಿಸಿ ಚಿನ್ನಾಭರಣ ದೋಚಿದ ಅಪರಿಚಿತರು - Karavali Times

728x90

11 May 2024

ಕರಾಯ : ಒಂಟಿ ಮಹಿಳೆಯಿದ್ದ ಮನೆಗೆ ಬಂದು ಚೂರಿ ತೋರಿಸಿ ಚಿನ್ನಾಭರಣ ದೋಚಿದ ಅಪರಿಚಿತರು

ಉಪ್ಪಿನಂಗಡಿ, ಮೇ 12, 2024 (ಕರಾವಳಿ ಟೈಮ್ಸ್) : ಒಂಟಿ ಮಹಿಳೆಯಿದ್ದ ಮನೆಗೆ ಬಂದ ಅಪರಿಚಿತ ಗಂಡಸು ಹಾಗೂ ಹೆಂಗಸು ಕುಡಿಯಲು ನೀರು ಕೇಳಿ ಬಳಿಕ ಚೂರಿ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಉಪ್ಪಿನಂಗಡಿ ಸಮೀಪದ ಕರಾಯ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಕರಾಯ ನಿವಾಸಿ ಸುಹೈಬಾ (25) ಅವರ ಮನೆ ಅಂಗಳಕ್ಕೆ ಶನಿವಾರ ಬೆಳಿಗ್ಗೆ ಬಂದ ಅಪರಿಚಿತ ಓರ್ವ ಗಂಡಸು ಮತ್ತು ಓರ್ವ ಹೆಂಗಸು ಸುಹೈಬಾ ಅವರಲ್ಲಿ ಮಾತನಾಡಿ, ಮನೆಯಲ್ಲಿರುವ ಸದಸ್ಯರುಗಳ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಕುಡಿಯಲು ನೀರು ಕೇಳಿದ್ದಾರೆ. ಸುಹೈಬಾ ನೀರು ತರಲು ಮನೆಯೊಳಗೆ ತೆರಳಿದಾಗ, ಅಪರಿಚಿತರು ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಗೋಡ್ರೇಜ್ ಬಾಗಿಲು ತೆರೆದು ಹುಡುಕಾಡಲು ಆರಂಭಿಸಿದ್ದಾರೆ. ಇದನ್ನು ಕಂಡ ಸುಹೈಬಾ ಅವರು ಬೊಬ್ಬೆ ಹಾಕಿ ತನ್ನ ಗಂಡ£ಗೆ ದೂರವಾಣಿ ಕರೆ ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭ ಅಪರಿಚಿತರು ಸುಹೈಬಾ ಕೈಯಲ್ಲಿದ್ದ ಮೊಬೈಲ್ ಫೆÇೀನನ್ನು ಎಳೆದು ಬಿಸಾಡಿ, ಹಲ್ಲೆ ನಡೆಸಿ, ಚೂರಿಯನ್ನು ತೋರಿಸಿ ಬೆದರಿಸಿ, ಸುಹೈಬಾ ಅವರ ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡಿರುತ್ತಾರೆ. ಈ ಸಂದರ್ಭ ಸುಹೈಬಾ ಅವರ ಬೊಬ್ಬೆ ಕೇಳಿ ನೆರೆಮನೆಯ ಮಹಿಳೆ ಬರುತ್ತಿರುವುದನ್ನು ಕಂಡ ಅಪರಿಚಿತರು ಮೋಟಾರ್ ಸೈಕಲಿನಲ್ಲಿ ಪರಾರಿಯಾಗಿದ್ದಾರೆ. 

ಅಪರಿಚಿತರು ದೋಚಿದ ಆಭರಣಗಳ ಮೌಲ್ಯ 1 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸುಹೈಬಾ ನೀಡಿದ ದೂರಿನಂತೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2024 ಕಲಂ 450, 394 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪರಿಚಿತರ ಪತ್ತೆಗೆ ಬಲೆ ಬೀಸಿದ್ದಾರೆ. 


  • Blogger Comments
  • Facebook Comments

0 comments:

Post a Comment

Item Reviewed: ಕರಾಯ : ಒಂಟಿ ಮಹಿಳೆಯಿದ್ದ ಮನೆಗೆ ಬಂದು ಚೂರಿ ತೋರಿಸಿ ಚಿನ್ನಾಭರಣ ದೋಚಿದ ಅಪರಿಚಿತರು Rating: 5 Reviewed By: karavali Times
Scroll to Top