ಪೇರಮೊಗರು : ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಆಸ್ಪತ್ರೆಗೆ - Karavali Times ಪೇರಮೊಗರು : ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಆಸ್ಪತ್ರೆಗೆ - Karavali Times

728x90

26 May 2024

ಪೇರಮೊಗರು : ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಆಸ್ಪತ್ರೆಗೆ

 ಬಂಟ್ವಾಳ, ಮೇ 27, 2024 (ಕರಾವಳಿ ಟೈಮ್ಸ್) : ನಿರ್ಮಾಣ ಹಂತದ ಬಿ ಸಿ ರೋಡು-ಅಡ್ಡಹೊಳೆ  ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪೇರಮೊಗ್ರು ಜಂಕ್ಷನ್ ಬಳಿ ಮೇ 23 ರಂದು ರಾತ್ರಿ ಸಂಭವಿಸಿದೆ.

ಗಾಯಗೊಂಡ ಬೈಕ್ ಸವಾರನನ್ನು ಸುರೇಶ್ ಪೂಜಾರಿ ಎಂದು ಹೆಸರಿಸಲಾಗಿದೆ. ಸುರೇಶ್‌ ಪೂಜಾರಿ ಅವರು ತನ್ನ ಬೈಕಿನಲ್ಲಿ ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆರ್ನೆ ಕಡೆಯಿಂದ ಮಾಣಿ ಕಡೆಗೆ ತೆರಳುತ್ತಿದ್ದ ವೇಳೆ ಕೆದಿಲ ಗ್ರಾಮದ ಪೇರಮೊಗರು ಜಂಕ್ಷನ್‌ ಬಳಿ ಒಮ್ಮೆಲೇ ಬ್ರೇಕ್‌ ಹಾಕಿದ ಪರಿಣಾಮ, ಸುರೇಶ್‌ ಪೂಜಾರಿ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳು ಸುರೇಶ್ ಪೂಜಾರಿ ಅವರನ್ನು ಮಾಣಿ ಕ್ಲಿನಿಕ್‌ ಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಲ್ಲಿಂದ ಪುತ್ತೂರು ಮಹಾವೀರ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಕೆ ಎಸ್‌ ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಬಗ್ಗೆ ಕಡೇಶಿವಾಲಯ ನಿವಾಸಿ ವಿನಯ ಕುಮಾರ್‌ ಟಿ ಎಂಬವರು ಮೇ 26 ರಂದು ನೀಡಿದ ದೂರಿನಂತೆ ಪುತ್ತೂರು ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪೇರಮೊಗರು : ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಆಸ್ಪತ್ರೆಗೆ Rating: 5 Reviewed By: lk
Scroll to Top