ವಿಟ್ಲ : ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಾರಿನಲ್ಲಿ ಬಂದು ಹಲ್ಲೆ - Karavali Times ವಿಟ್ಲ : ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಾರಿನಲ್ಲಿ ಬಂದು ಹಲ್ಲೆ - Karavali Times

728x90

5 June 2024

ವಿಟ್ಲ : ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಾರಿನಲ್ಲಿ ಬಂದು ಹಲ್ಲೆ

ಬಂಟ್ವಾಳ, ಜೂನ್ 05, 2024 (ಕರಾವಳಿ ಟೈಮ್ಸ್) : ರಸ್ತೆಗೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರಿನಲ್ಲಿ ಬಂದ ಆರೋಪಿ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಚೂರಿಯಿಂದ ಚುಚ್ಚಲು ಪ್ರಯತ್ನಿಸಿದ ಘಟನೆ ಕೇಪು ಗ್ರಾಮದ ಬಡಕೋಡಿ ಎಂಬಲ್ಲಿ ಸೋಮವಾರ ರಾತ್ರಿ ವೇಳೆ ಸಂಭವಿಸಿದೆ. 

ಹಲ್ಲೆಗೊಳಗಾದ ವ್ಯಕ್ತಿಯನ್ನು ಕೇಪು ಗ್ರಾಮದ ನಿವಾಸಿ ಚಂದ್ರ ಯಾನೆ ಚಂದ್ರಹಾಸ (37) ಎಂದು ಹೆಸರಿಸಲಾಗಿದ್ದು, ಆರೋಪಿಯನ್ನು ಗಣೇಶ್ ಯಾನ್ ಕೇಪು ಗಣೇಶ್ ಎಂದು ಗುರುತಿಸಲಾಗಿದೆ. ಚಂದ್ರಹಾಸ ಅವರು ಸೋಮವಾರ ರಾತ್ರಿ ಕೇಪು ಗ್ರಾಮದ ಬಡಕೋಡಿ ಎಂಬಲ್ಲಿ ಹೋಗುತ್ತಿದ್ದಾಗ, ಆರೋಪಿ ಗಣೇಶ್ ಯಾನೆ ಕೇಪು ಗಣೇಶ್ ಎಂಬಾತನು ಕಾರಿನಲ್ಲಿ ವೇಗವಾಗಿ ಬಂದು ನಿಲ್ಲಿಸಿ, ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ, ಚೂರಿಯಿಂದ ಚುಚ್ಚಲು ಯತ್ನಿಸಿರುತ್ತಾರೆ. ಘಟನೆಯಿಂದ ಚಂದ್ರ ಹಾಗೂ ಗಣೇಶ ಇಬ್ಬರಿಗೂ ಗಾಯಗಳಾಗಿವೆ. ಬಳಿಕ ಆರೋಪಿ ಜೀವ ಬೆದರಿಕೆ ಒಡ್ಡಿ ಸ್ಥಳದಿಂದ ತೆರಳಿರುತ್ತಾನೆ ಎಂದು ಚಂದ್ರ ಅವರು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲ : ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕಾರಿನಲ್ಲಿ ಬಂದು ಹಲ್ಲೆ Rating: 5 Reviewed By: karavali Times
Scroll to Top