ಬಂಟ್ವಾಳ, ಜೂನ್ 26, 2024 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸಬಾ ಗ್ರಾಮದ ಹೂಸ್ಮಾರ್ ಎಂಬಲ್ಲಿ ಅಶೋಕ್ ಬಿನ್ ತುಕ್ರ ಪೂಜಾರಿ ಹಾಗೂ ಗಣೇಶ ಪೂಜಾರಿ ಬಿನ್ ತುಕ್ರ ಪೂಜಾರಿ ಎಂಬವರ ಮನೆ ಬದಿಯ ಕಾಂಪೌಡ್ ಕುಸಿದು ರಸ್ತೆಗೆ ಬಿದ್ದಿದ್ದು 2 ಮನೆಗಳು ಅಪಾಯದ ಸ್ಥಿತಿಯಲ್ಲಿದೆ. ಸ್ಥಳಕ್ಕೆ ಭೇಟಿ ನೀಡಿರುವ ಕಂದಾಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಮನೆ ಮಂದಿಯನ್ನು ಸ್ಥಳಾಂತರ ಮಾಡಲು ತಿಳಿಸಿದ್ದಾರೆ. ಮನೆ ಮಂದಿ ಸಂಬಂಧಿಕರ ಮನೆಗೆ ಸ್ಥಳಾಂತರಗೊಳ್ಳಲು ಒಪ್ಪಿದ್ದಾರೆ. ಪುರಸಭಾ ಜೆಸಿಬಿ ಬಳಸಿ ಮಣ್ಣು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಸದ್ರಿ ಕಾಂಪೌಂಡಿಗೆ ತುರ್ತು ತಡೆಗೋಡೆ ನಿರ್ಮಾಣದ ಅಗತ್ಯದ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ.
26 June 2024
Related Posts
- Blogger Comments
- Facebook Comments
Subscribe to:
Post Comments (Atom)
0 comments:
Post a Comment