ಬಂಟ್ವಾಳ : ಸಿಡಿಲಿಗೆ ಮೂವರಿಗೆ ಗಾಯ, ಕೆಲವೆಡೆ ಗಾಳಿ-ಮಳೆಗೆ ಮನೆಗಳಿಗೆ ಹಾನಿ - Karavali Times ಬಂಟ್ವಾಳ : ಸಿಡಿಲಿಗೆ ಮೂವರಿಗೆ ಗಾಯ, ಕೆಲವೆಡೆ ಗಾಳಿ-ಮಳೆಗೆ ಮನೆಗಳಿಗೆ ಹಾನಿ - Karavali Times

728x90

3 June 2024

ಬಂಟ್ವಾಳ : ಸಿಡಿಲಿಗೆ ಮೂವರಿಗೆ ಗಾಯ, ಕೆಲವೆಡೆ ಗಾಳಿ-ಮಳೆಗೆ ಮನೆಗಳಿಗೆ ಹಾನಿ

 ಬಂಟ್ವಾಳ, ಜೂನ್ 03, 2024 (ಕರಾವಳಿ ಟೈಮ್ಸ್) : ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಸುರಿದ ಮಳೆಗೆ ಸಿಡಿಲಾಘಾತ ಹಾಗೂ ಮಳೆ ಹಾನಿ ಪ್ರಕರಣಗಳು ದಾಖಲಾಗಿವೆ. 

ಕುಡಂಬೆಟ್ಟು ಗ್ರಾಮದ ಸುಬೊಟ್ಟು ನಿವಾಸಿ ಅನಿತಾ ಕೋಂ ಗಿರೀಶ್ ಪೂಜಾರಿ ಹಾಗೂ ರಾಮಯ್ಯ ಗುರಿ ನಿವಾಸಿ ಲೀಲಾವತಿ ಬಿನ್ ಸಿಂಗ ಮತ್ತು ಮೋಹಿನಿ ಬಿನ್ ಸಿಂಗ ಅವರಿಗೆ ಸಿಡಿಲು ಬಡಿದು ಗಾಯಗಳಾಗಿದ್ದು  ಅವರನ್ನು ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇರ್ವತ್ತೂರು ಗ್ರಾಮದ ಕುಲಾಲ್ ನಿವಾಸಿ ಜೈ ಲಕ್ಷ್ಮಿ ಅವರ ಅಡಿಕೆ ತೋಟ ಹಾಗೂ ತೆಂಗಿನ ಮರಗಳಿಗೆ ಗಾಳಿ ಮಳೆಯಿಂದಾಗಿ ಕೃಷಿ ಹಾನಿ ಸಂಭವಿಸಿದೆ. ಪ್ರೇಮಲತಾ ಅವರ ವಾಸ್ತವ್ಯದ ಮನೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಅಜ್ಜಿಬೆಟ್ಟು ಗ್ರಾಮದ ಪಚ್ಚೇರಿಪಲ್ಕೆ ನಿವಾಸಿ ಅಪ್ಪಿ ಕೋಂ ರುಕ್ಮಯ್ಯ ಅವರ ಪಕ್ಕಾ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. ಪಾಂಗಲ್ಪಾಡಿ ನಿವಾಸಿ ಶೋಭಾ ಕೋಂ ಕರಿಯ ಅವರ ಪಕ್ಕಾ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಸಿಡಿಲಿಗೆ ಮೂವರಿಗೆ ಗಾಯ, ಕೆಲವೆಡೆ ಗಾಳಿ-ಮಳೆಗೆ ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top