ಬಂಟ್ವಾಳ, ಮೇ 31, 2025 (ಕರಾವಳಿ ಟೈಮ್ಸ್) : ದ್ವಿಚಕ್ರ ವಾಹನದಲ್ಲಿ ಮೆಡಿಕಲಿಗೆಂದು ತೆರಳಿದ ವ್ಯಕ್ತಿಯನ್ನು ತಡೆದ ನಾಲ್ಕೈದು ಮಂದಿಯ ತಂಡ ಬೈದು ಹಲ್ಲೆ ನಡೆಸಿದ್ದಲ್ಲದೆ ಜಾತಿನಿಂದನೆಗೈದ ಘಟನೆ ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿ ಎಂಬಲ್ಲಿ ಶುಕ್ರವಾರ ರಾತ್ರಿ ವೇಳೆ ನಡೆದಿದೆ.
ಬಾಳ್ತಿಲ ಗ್ರಾಮದ ಬಿ ಆರ್ ನಗರ ನಿವಾಸಿ ನವೀನ್ ಎಂಬವರು ಶುಕ್ರವಾರ ರಾತ್ರಿ ಮೆಡಿಕಲ್ ಗೆ ದ್ವಿ ಚಕ್ರ ವಾಹನದಲ್ಲಿ ಹೋಗಿ ಹಿಂದಿರುಗಿ ಬಂದಾಗ ಪೂರ್ಲಿಪಾಡಿ ಎಂಬಲ್ಲಿ ಕಾರಿನಲ್ಲಿ ಬಂದ ಅಮಿತ್ ಹಾಗೂ ಆತನ ನಾಲ್ಕು ಮಂದಿಯ ತಂಡ ನವೀನ್ ಅವರ ವಾಹನ ಅಡ್ಡಗಟ್ಟಿ ನೀನು ಯಾರು ಎಲ್ಲಿಯವನು ಎಂದು ಕೇಳಿದ್ದಾರೆ. ನವೀನ್ ಅವರು ತನ್ನ ತಂದೆಯ ಹೆಸರು ಹೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಬಟ್ಟೆ ಹರಿದಿರುತ್ತಾರೆ. ಅದನ್ನು ಪ್ರಶ್ನಿಸಲು ಹೋದ ಚಿಕ್ಕಪ್ಪ ತಿಮ್ಮಪ್ಪ ಎಂಬವರ ಜೊತೆ ಜಾತಿ ನಿಂದನೆ ಮಾಡಿರುತ್ತಾರೆ ಎಂದು ದೂರಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment