ಬಂಟ್ವಾಳ, ಮೇ 25, 2025 (ಕರಾವಳಿ ಟೈಮ್ಸ್) : ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಮನೆಯ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳ್ಳಿಗೆ ಗ್ರಾಮದ ಚಂದ್ರಿಗೆ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕಳ್ಳಿಗೆ ಗ್ರಾಮದ ಚಂದ್ರಿಗೆ ಮನೆ ನಿವಾಸಿ ಮುತ್ತಪ್ಪ ಮೂಲ್ಯ ಎಂಬವರ ಪುತ್ರ ಅನಿಲ್ ಎಂದು ಹೆಸರಿಸಲಾಗಿದೆ. ಮುತ್ತಪ್ಪ ಮೂಲ್ಯರಿಗೆ 5 ಮಂದಿ ಮಕ್ಕಳಿದ್ದು, ಈ ಪೈಕಿ ಅನಿಲ್ ಎಂಬಾತನಿಗೆ ಚಿಕ್ಕಂದಿನಿಂದಲೇ ಅಸ್ತಮಾ ಕಾಯಿಲೆ ಇದ್ದು, ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 23 ರಂದು ರಾತ್ರಿ ಮನೆಯಲ್ಲಿ ಎಲ್ಲರೂ ಊಟ ಮಾಡಿ ಮಲಗಿದ್ದು, ಅನಿಲ್ ಕೂಡಾ ತನ್ನ ಕೋಣೆಗೆ ಹೋಗಿ ಚಿಲಕ ಹಾಕಿಕೊಂಡು ಮಲಗಿದ್ದಾನೆ. ಬಳಿಕ ಈತ ತನ್ನ ಕೋಣೆಯಲ್ಲೇ ಫ್ಯಾನ್ ಗೆ ಬೈರಾಸ್ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ತನ್ನ ಕಾಯಿಲೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
0 comments:
Post a Comment