ವಿಟ್ಲ : ಪಾಶ್ರ್ವವಾಯು ಪೀಡಿತರಾಗಿ ಮನೆಯಲ್ಲಿ ರಜೆಯಲ್ಲಿದ್ದ ಎಎಸ್ಸೈ ಉಸಿರಾಟ ಸಮಸ್ಯೆಯಿಂದ ಕುಸಿದು ಬಿದ್ದು ಮೃತ್ಯು - Karavali Times ವಿಟ್ಲ : ಪಾಶ್ರ್ವವಾಯು ಪೀಡಿತರಾಗಿ ಮನೆಯಲ್ಲಿ ರಜೆಯಲ್ಲಿದ್ದ ಎಎಸ್ಸೈ ಉಸಿರಾಟ ಸಮಸ್ಯೆಯಿಂದ ಕುಸಿದು ಬಿದ್ದು ಮೃತ್ಯು - Karavali Times

728x90

29 May 2025

ವಿಟ್ಲ : ಪಾಶ್ರ್ವವಾಯು ಪೀಡಿತರಾಗಿ ಮನೆಯಲ್ಲಿ ರಜೆಯಲ್ಲಿದ್ದ ಎಎಸ್ಸೈ ಉಸಿರಾಟ ಸಮಸ್ಯೆಯಿಂದ ಕುಸಿದು ಬಿದ್ದು ಮೃತ್ಯು

ಬಂಟ್ವಾಳ, ಮೇ 29, 2025 (ಕರಾವಳಿ ಟೈಮ್ಸ್) : ಕರ್ತವ್ಯದಲ್ಲಿದ್ದಾಗಲೇ ಪಾಶ್ರ್ವವಾಯುಗೆ ಒಳಗಾಗಿ ಖಾಯಿಲೆ ರಜೆಯಲ್ಲಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಎಎಸ್ಸೈ ಓರ್ವರು ಉಸಿರಾಟದ ಸಮಸ್ಯೆ ತಲೆದೋರಿ ಕುಸಿದು ಬಿದ್ದು ಮೃತಪಟ್ಟ ಘಟನೆ ವಿಟ್ಲಕಸಬಾ ಗ್ರಾಮದ ಬೊಬ್ಬೆಕೇರಿ ಎಂಬಲ್ಲಿ ಮೇ 27 ರಂದು ಮಂಗಳವಾರ ರಾತ್ರಿ ಸಂಭವಿಸಿದೆ. 

ಮೃತ ಪೊಲೀಸ್ ಎಸ್ಸೈ ಅವರನ್ನು ಹರೀಶ್ ವಿ (58) ಎಂದು ಹೆಸರಿಸಲಾಗಿದೆ. ಇವರು ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಒಮ್ಮೆಲೆ ಪಾಶ್ರ್ವವಾಯು ಪೀಡಿತರಾಗಿದ್ದರು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಾ ಕಾಯಿಲೆ ರಜೆಯಲ್ಲಿದ್ದರು. 2 ವರ್ಷಗಳ ಹಿಂದೆ ಇವರಿಗೆ ಬಂಟ್ವಾಳ ನಗರ ಠಾಣೆಗೆ ವರ್ಗಾವಣೆ ಆದೇಶವಾಗಿದ್ದು, ಕಾಯಿಲೆ ರಜೆಯಲ್ಲಿದ್ದುದರಿಂದ ಕೆಲಸಕ್ಕೆ ಹಾಜರಾಗದೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. 

ಮೇ 27 ರಂದು ಮಂಗಳವಾರ ರಾತ್ರಿ ಇವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಪತ್ನಿ ಉಪಚರಿಸುತ್ತಿದ್ದಾಗ ಒಮ್ಮೆಲೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಪತ್ನಿ ಸಂಬಂಧಿಕರೊಡಗೂಡಿ ವಿಟ್ಲ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಪುತ್ರಿ ಶರಣ್ಯ ವಿ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲ : ಪಾಶ್ರ್ವವಾಯು ಪೀಡಿತರಾಗಿ ಮನೆಯಲ್ಲಿ ರಜೆಯಲ್ಲಿದ್ದ ಎಎಸ್ಸೈ ಉಸಿರಾಟ ಸಮಸ್ಯೆಯಿಂದ ಕುಸಿದು ಬಿದ್ದು ಮೃತ್ಯು Rating: 5 Reviewed By: karavali Times
Scroll to Top