ಮಳೆ : ಬಾಳ್ತಿಲ, ಮೇರಮಜಲು, ಕಡೇಶ್ವಾಲ್ಯ, ಪಾಣೆಮಂಗಳೂರಿನಲ್ಲಿ ಮನೆಗಳಿಗೆ ಹಾನಿ - Karavali Times ಮಳೆ : ಬಾಳ್ತಿಲ, ಮೇರಮಜಲು, ಕಡೇಶ್ವಾಲ್ಯ, ಪಾಣೆಮಂಗಳೂರಿನಲ್ಲಿ ಮನೆಗಳಿಗೆ ಹಾನಿ - Karavali Times

728x90

29 May 2025

ಮಳೆ : ಬಾಳ್ತಿಲ, ಮೇರಮಜಲು, ಕಡೇಶ್ವಾಲ್ಯ, ಪಾಣೆಮಂಗಳೂರಿನಲ್ಲಿ ಮನೆಗಳಿಗೆ ಹಾನಿ

ಬಂಟ್ವಾಳ, ಮೇ 29, 2025 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಮನೆ ಹಾನಿ ಪ್ರಕರಣಗಳು ಮುಂದುವರಿದಿದೆ. ಬಾಳ್ತಿಲ ಗ್ರಾಮದ ನಿವಾಸಿ ಯಶೋಧ ಅವರ ಮನೆಯ ಹಿಂಬದಿಯ ಬರೆಯ ಮಣ್ಣು ಜರಿದು ಬಿದ್ದಿದೆ. ಮೇರಮಜಲು ಗ್ರಾಮದ ತೇವುಕಾಡು ನಿವಾಸಿ ರೇವತಿ ಕೋಂ ಜನಾರ್ಧನ ಪೂಜಾರಿ ಅವರ ಮನೆಗೆ ತಾಗಿದ ಆವರಣ ಗೋಡೆ ಕುಸಿದಿದ್ದು ಮನೆಗೆ ಹಾನಿಯಾಗುವ ಸಾಧ್ಯತೆ ಇದೆ. ಕಡೇಶ್ವಾಲ್ಯ ಗ್ರಾಮದ ನಿವಾಸಿ ಪಾರ್ವತಿ ಕೋಂ ರಾಮಣ್ಣ ಪೂಜಾರಿ ಅವರ ಮನೆ ಭಾಗಶಃ ಹಾನಿಯಾಗಿದೆ. ಪಾಣೆಮಂಗಳೂರು ಗ್ರಾಮದ ತೆಕ್ಕಿಗುಡ್ಡೆ ನಿವಾಸಿ ಮೋಕ್ಷಿತ ಅವರ ವಾಸ್ತವ್ಯದ ಮನೆಗೆ ಹಾನಿ ಸಂಭವಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮಳೆ : ಬಾಳ್ತಿಲ, ಮೇರಮಜಲು, ಕಡೇಶ್ವಾಲ್ಯ, ಪಾಣೆಮಂಗಳೂರಿನಲ್ಲಿ ಮನೆಗಳಿಗೆ ಹಾನಿ Rating: 5 Reviewed By: karavali Times
Scroll to Top