ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಗೆಟ್ಟ ಲಾ ಆಂಡ್ ಆರ್ಡರ್ : ಐಜಿಪಿ ಭೇಟಿಯಾದ ರಮಾನಾಥ ರೈ, ರೌಡಿ ಶೀಟರ್ ಹಾಗೂ ಕ್ರಿಮಿನಲ್ ಗಳ ವಿರುದ್ದ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲು ಸೂಚನೆ - Karavali Times ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಗೆಟ್ಟ ಲಾ ಆಂಡ್ ಆರ್ಡರ್ : ಐಜಿಪಿ ಭೇಟಿಯಾದ ರಮಾನಾಥ ರೈ, ರೌಡಿ ಶೀಟರ್ ಹಾಗೂ ಕ್ರಿಮಿನಲ್ ಗಳ ವಿರುದ್ದ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲು ಸೂಚನೆ - Karavali Times

728x90

29 May 2025

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಗೆಟ್ಟ ಲಾ ಆಂಡ್ ಆರ್ಡರ್ : ಐಜಿಪಿ ಭೇಟಿಯಾದ ರಮಾನಾಥ ರೈ, ರೌಡಿ ಶೀಟರ್ ಹಾಗೂ ಕ್ರಿಮಿನಲ್ ಗಳ ವಿರುದ್ದ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲು ಸೂಚನೆ

ಮಂಗಳೂರು, ಮೇ 29, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಿಂಗಳೊಳಗೆ ಮೂರು ಕೋಮು ಸಂಬಂಧಿ ಹತ್ಯಾ ಪ್ರಕರಣಗಳು ನಡೆದು ಜಿಲ್ಲೆಯಲ್ಲಿ ಕೆಲ ದಿನಗಳಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವ ಹಿನ್ನಲೆಯಲ್ಲಿ ಮಾಜಿ ಸಚಿವ ಬಿ ರಮನಾಥ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಗುರುವಾರ ಪಶ್ಚಿಮ ವಲಯ ಐಜಿಪಿ ಡಾ ಅಮಿತ್ ಸಿಂಗ್ ಅವರನ್ನು ಭೇಟಿಯಾಗಿ ಸುರ್ದೀಘ ಚರ್ಚೆ ನಡೆಸಿದ್ದಾರೆ. 

ಜಿಲ್ಲೆಯಲ್ಲಿ ರೌಡಿಶೀಟರ್‍ಗಳು ಹಾಗೂ ಕ್ರಿಮಿನಲ್ ಗಳ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಮೃದು ಧೋರಣೆ ತಾಳಬಾರದು. ಕಾಲ ಕಾಲಕ್ಕೆ ರೌಡಿ ಶೀಟರ್ ಗಳ ಪೆರೇಡ್ ನಡೆಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ನಿಂತು ಹೋಗಿದ್ದು, ಅದನ್ನು ಮತ್ತೆ ಆರಂಭಿಸಿ ರೌಡಿಗಳ ಹಾಗೂ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಬಗ್ಗೆ ಕಟ್ಟು ನಿಟ್ಟಿನ ನಿಗಾ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಐಜಿಪಿ ಡಾ ಅಮಿತ್ ಸಿಂಗ್ ಅವರಿಗೆ ರಮಾನಾಥ ರೈ ಸೂಚಿಸಿದ್ದಾರೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಐಜಿಪಿ ಡಾ ಸಿಂಗ್ ಅವರು ಜಿಲ್ಲೆಯಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಗೆ ತರುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕ್ರಿಮಿನಲ್ ಗಳು ಬಾಲ ಬಿಚ್ಚದಂತೆ ಎಚ್ಚರ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಎಂ ಅಬ್ಬಾಸ್ ಅಲಿ, ಪದ್ಮಶೇಖರ್ ಜೈನ್, ಬೇಬಿ ಕುಂದರ್, ಇಬ್ರಾಹಿಂ ನವಾಝ್, ಸುದೀಪ್ ಕುಮಾರ್ ಶೆಟ್ಟಿ, ಸುರೇಶ್ ನಾವೂರು, ಚಂದ್ರಶೇಖರ್ ಭಂಡಾರಿ, ಬಾಲಕೃಷ್ಣ ಅಂಚನ್, ಇಬ್ರಾಹಿಂ ಕೈಲಾರ್ ನಿಯೋಗದಲ್ಲಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಗೆಟ್ಟ ಲಾ ಆಂಡ್ ಆರ್ಡರ್ : ಐಜಿಪಿ ಭೇಟಿಯಾದ ರಮಾನಾಥ ರೈ, ರೌಡಿ ಶೀಟರ್ ಹಾಗೂ ಕ್ರಿಮಿನಲ್ ಗಳ ವಿರುದ್ದ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲು ಸೂಚನೆ Rating: 5 Reviewed By: karavali Times
Scroll to Top